ತುಮಕೂರು ಕಡೆಯಿಂದ ಕೆಎಸ್ಆರ್ಟಿಸಿ ಅಥವಾ ಬೇರೆ ವಾಹನಗಳಲ್ಲಿ ಬರುವ ಪ್ರಯಾಣಿಕರಿಗೆ ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಹೋಗಲು ದಾರಿಯೇ ಇಲ್ಲ. ರಸ್ತೆಯ ಮಧ್ಯೆ ಇರುವ ಕಬ್ಬಿಣದ ಎತ್ತರದ ವಿಭಜಕವನ್ನು ಸಾಹಸ ಮಾಡಿ ದಾಟಬೇಕು. ಎರಡೂ ಕಡೆಯಿಂದ ಕಡೆಯಿಂದ ವೇಗವಾಗಿ ಬರುವ ವಾಹನಗಳಿಂದಾಗಿ ಜೀವವನ್ನೇ ಪಣಕ್ಕಿಡಬೇಕಿದೆ. ಇಷ್ಟಾದರೂ ಸಂಬಂಧಿಸಿದವರು ಗಮನಿಸುತ್ತಿಲ್ಲ.