ಸದ್ಯ ಈ ಕಡತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರ ಬಳಿ ಒಪ್ಪಿಗೆಗಾಗಿ ಕಾದು ಕುಳಿತಿದೆ. ಹಿನ್ನೆಲೆ:ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಪ್ರಭಾಕರ ಭಟ್ ಅವರ ಕಲ್ಲಡ್ಕದ ಶ್ರೀರಾಮ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬಿಸಿಯೂಟ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಸ್ಥಾನದಿಂದ ಖಾಸಗಿ ಶಾಲೆಗೆ ಬಿಸಿಯೂಟ ನೀಡುವುದಕ್ಕೆ ಆಕ್ಷೇಪ ಇದೆ ಎಂದು ಹೇಳಿ ಈ ಕ್ರಮ ಕೈಗೊಳ್ಳಲಾಗಿತ್ತು. 2018ರ ವಿಧಾನಸಭಾ ಚುನಾವಣೆ ವೇಳೆ ಈ ವಿಷಯವೂ ಒಂದು ಭಾವನಾತ್ಮಕ ಚುನಾವಣಾ ವಿಚಾರವಾಗಿತ್ತು.