ಸದ್ಯ ಮಕ್ಕಳಿಗೆ ಬಿಸಿಯೂಟದ ಜತೆಗೆ ಅನ್ನ, ತರಕಾರಿ ಸಾಂಬಾರ್, ಮೊಸರು, ಬೇಳೆ ಸಾರು, ಉಪ್ಪಿಟ್ಟು, ಅವಲಕ್ಕಿ, ಪೊಂಗಲ್, ಬಿಸಿಬೇಳೆಬಾತ್ ನೀಡಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಲ್ಲಿ ಮಕ್ಕಳಿಗೆ ಪರಿಮಳಭರಿತ ಹಾಲು, ಕೆಲವು ಜಿಲ್ಲೆಗಳಲ್ಲಿ ಎನ್ಜಿಒಗಳ ಸಹಕಾರದಲ್ಲಿ ಪೌಷ್ಟಿಕಾಂಶಯುಕ್ತ ಹಾಲು ನೀಡಲಾಗುತ್ತಿದೆ. ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನೂ ನೀಡಬಹುದು ಎಂದು ಕೇಂದ್ರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈಚೆಗೆ ರಾಜ್ಯಗಳಿಗೆ ಸೂಚಿನೆ ನೀಡಿತ್ತು.