<p><strong>ಬೆಂಗಳೂರು:</strong> ಬೆಂಗಳೂರು ದಕ್ಷಿಣ ವ್ಯಾಪ್ತಿಯ ನಾಗರಿಕರಿಗೆ ಸರ್ಕಾರಿ ಸೇವೆಗಳ ಮಾಹಿತಿ ಹಾಗೂ ವಿವಿಧ ಯೋಜನೆಗಳ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ‘ಸಂಚಾರ ಸಾಮಾನ್ಯ ಸೇವಾ ಕೇಂದ್ರ’ಕ್ಕೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಚಾಲನೆ ನೀಡಿದರು.</p>.<p>‘ಸರ್ಕಾರದ ಸೇವೆಗಳಾದ ಸೇವಾ ಸಿಂಧು, ವೃದ್ಧಾಪ್ಯ ವೇತನ, ಜನನ ಪ್ರಮಾಣಪತ್ರ, ಮರಣ ಪ್ರಮಾಣ ಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹಾಗೂ ಮತದಾರರ ಗುರುತಿನ ಚೀಟಿ ಮೊದಲಾದ ಸೇವೆಗಳನ್ನು ಈ ಸಂಚಾರ ವಾಹನದ ಮೂಲಕ ಸಾರ್ವಜನಿಕರು ಪಡೆಯಬಹುದು’ ಎಂದು ತೇಜಸ್ವಿ ಸೂರ್ಯ ಹೇಳಿದರು.</p>.<p>’ಸಂಚಾರ ಸಾಮಾನ್ಯ ಸೇವಾ ಕೇಂದ್ರಗಳು ಲಭ್ಯ ಇರುವ ಸ್ಥಳಗಳ ಮಾಹಿತಿ ಹಾಗೂ ದಿನಾಂಕವನ್ನು ಜನರಿಗೆ ತಿಳಿಸಲಾಗುವುದು. ತಮ್ಮ ಹತ್ತಿರದ ಸ್ಥಳಗಳಿಂದಲೇ ಸಾರ್ವಜನಿಕರು ಈ ಸೇವೆಗಳನ್ನು ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಸಿಎಸ್ಸಿ ಮತ್ತು ಇ-ಗವರ್ನನ್ಸ್ ಮುಖ್ಯಸ್ಥ ಎಸ್.ಪಿ. ಕುಲಕರ್ಣಿ, ಸಿಎಸ್ಸಿ ಸೊಸೈಟಿ ಅಧ್ಯಕ್ಷ ಜಗದೀಶ್, ಆಕ್ಟ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಗಗನ್ ನಂದಿ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ದಕ್ಷಿಣ ವ್ಯಾಪ್ತಿಯ ನಾಗರಿಕರಿಗೆ ಸರ್ಕಾರಿ ಸೇವೆಗಳ ಮಾಹಿತಿ ಹಾಗೂ ವಿವಿಧ ಯೋಜನೆಗಳ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ‘ಸಂಚಾರ ಸಾಮಾನ್ಯ ಸೇವಾ ಕೇಂದ್ರ’ಕ್ಕೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಚಾಲನೆ ನೀಡಿದರು.</p>.<p>‘ಸರ್ಕಾರದ ಸೇವೆಗಳಾದ ಸೇವಾ ಸಿಂಧು, ವೃದ್ಧಾಪ್ಯ ವೇತನ, ಜನನ ಪ್ರಮಾಣಪತ್ರ, ಮರಣ ಪ್ರಮಾಣ ಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹಾಗೂ ಮತದಾರರ ಗುರುತಿನ ಚೀಟಿ ಮೊದಲಾದ ಸೇವೆಗಳನ್ನು ಈ ಸಂಚಾರ ವಾಹನದ ಮೂಲಕ ಸಾರ್ವಜನಿಕರು ಪಡೆಯಬಹುದು’ ಎಂದು ತೇಜಸ್ವಿ ಸೂರ್ಯ ಹೇಳಿದರು.</p>.<p>’ಸಂಚಾರ ಸಾಮಾನ್ಯ ಸೇವಾ ಕೇಂದ್ರಗಳು ಲಭ್ಯ ಇರುವ ಸ್ಥಳಗಳ ಮಾಹಿತಿ ಹಾಗೂ ದಿನಾಂಕವನ್ನು ಜನರಿಗೆ ತಿಳಿಸಲಾಗುವುದು. ತಮ್ಮ ಹತ್ತಿರದ ಸ್ಥಳಗಳಿಂದಲೇ ಸಾರ್ವಜನಿಕರು ಈ ಸೇವೆಗಳನ್ನು ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಸಿಎಸ್ಸಿ ಮತ್ತು ಇ-ಗವರ್ನನ್ಸ್ ಮುಖ್ಯಸ್ಥ ಎಸ್.ಪಿ. ಕುಲಕರ್ಣಿ, ಸಿಎಸ್ಸಿ ಸೊಸೈಟಿ ಅಧ್ಯಕ್ಷ ಜಗದೀಶ್, ಆಕ್ಟ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಗಗನ್ ನಂದಿ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>