‘ಮರುದಿನ ಬೆಳಿಗ್ಗೆ 5 ಗಂಟೆಗೆ ಬಸ್ ಬೆಂಗಳೂರು ಪ್ರವೇಶಿಸಿತ್ತು. ಯುವತಿ ನಿದ್ದೆಯಲ್ಲಿದ್ದರು. ದಾಸರಹಳ್ಳಿಯಿಂದ ಪೀಣ್ಯಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯ ಆಸನದ ಬಳಿ ಹೋಗಿದ್ದ ಆರೋಪಿ, ಕೆನ್ನೆಗೆ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದ. ಎಚ್ಚರಗೊಂಡ ಯುವತಿ, ಆತನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಪೀಣ್ಯ ನಿಲ್ದಾಣದಲ್ಲಿ ಆರೋಪಿ ಇಳಿದು ಹೋಗಿದ್ದಾನೆ’ ಎಂದೂ ಪೊಲೀಸ್ ಮೂಲಗಳು
ಹೇಳಿವೆ.