ತುಮಕೂರು: ವ್ಯಕ್ತಿಯೊಬ್ಬರ ಮೊಬೈಲ್ ಸಿಮ್ ಪರಿಶೀಲನೆ ನೆಪದಲ್ಲಿ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ಪಡೆದುಕೊಂಡು ವಂಚಿಸಲಾಗಿದೆ.
ಲಿಂಗಾಪುರದ ಪರಮ್ ಹನ್ಸ್ ತ್ರಿಪಾಠಿ ಎಂಬುವವರ ಮೊಬೈಲ್ಗೆ ಮೆಸೇಜ್ ಬಂದಿದ್ದು, ಅವರು ಆ ಸಂಖ್ಯೆಗೆ ಕರೆ ಮಾಡಿದಾಗ ‘ನಿಮ್ಮ ಮೊಬೈಲ್ ಸಿಮ್ ವೆರಿಫಿಕೇಷನ್ ಪ್ರೋಸೆಸ್ ಮಾಡಬೇಕು. ಅದಕ್ಕಾಗಿ ₹10 ಕಳುಹಿಸುವಂತೆ ಹೇಳಿದ್ದಾರೆ. ಅವರು ಕಳುಹಿಸಿದ ಲಿಂಕ್ ಒಪನ್ ಮಾಡಿಕೊಂಡು ಕ್ವಿಕ್ ಸಪೋರ್ಟ್ ಡೌನ್ಲೋಡ್ ಮಾಡಿಕೊಂಡು ಹಣ ಕಳುಹಿಸುವಂತೆ ತಿಳಿಸಿದ್ದಾರೆ’.
ಅದರಂತೆ ಲಿಂಕ್ ತೆರೆದು ಅದರಲ್ಲಿ ಎಟಿಎಂ ಕಾರ್ಡ್, ಒಟಿಪಿ ವಿವರಗಳನ್ನು ನೀಡಿದ್ದಾರೆ. ನಂತರ ಕೆನರಾ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಒಟ್ಟು ₹69,973 ಕಡಿತಗೊಂಡಿದೆ. ಮೋಸ ಮಾಡಿದವರನ್ನು ಪತ್ತೆಮಾಡಿ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.