<p><strong>ಕೆಂಗೇರಿ</strong>: ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಗೌತಮ ಬುದ್ಧನ ಏಕಶಿಲಾ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.</p>.<p>ಬ್ರಿಟಿಷ್ ಮೂಲದ ಬೌದ್ಧ ಬಿಕ್ಕು ಅಜಾನ್ ಜಯಸಾರೋ ಮಹಾತೇರ ಅವರು ಬುದ್ಧ ಬೋಧನೆಗಳ ಪಠಣದೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೂರಾರು ಬೌದ್ಧ ಬಿಕ್ಕುಗಳು ಸಂಭ್ರಮಕ್ಕೆ ಸಾಕ್ಷಿಯಾದರು.</p>.<p>ಅಜಾನ್ ಜಯಸಾರೋ ಮಹಾತೇರ ಮಾತನಾಡಿ, ‘ಸ್ಥಾಪಿತ ಸಂಪ್ರದಾಯ ಹಾಗೂ ಆಚರಣೆಗಳನ್ನು ಪಾಲನೆ ಮಾಡುವ ಧರ್ಮಗಳ ನಡುವೆ ನೈಜ ಕರ್ಮಸಿದ್ದಾಂತ ಪ್ರತಿಪಾದನೆಗೆ ಒತ್ತು ನೀಡಿದ ಬೌದ್ಧ ಧರ್ಮ, ಜಾಗತಿಕ ಮತವಾಗಿ ರೂಪುಗೊಂಡಿದೆ’ ಎಂದು ಹೇಳಿದರು.</p>.<p>‘ನರಮೇಧ ನಡೆಸಿ, ಹಿಂಸೆ, ಹೇರಿಕೆಯಿಂದ ಮತವನ್ನು ಸದೃಢಗೊಳಿಸಲು, ವಿಸ್ತರಿಸಲು ಸಾಧ್ಯವಿಲ್ಲ. ಅಂತಹ ನಡೆ ದೀರ್ಘಕಾಲದವರೆಗೆ ಫಲ ನೀಡುವುದಿಲ್ಲ. ಶಾಂತಿ ಹಾಗೂ ಮಾನವೀಯ ಮೌಲ್ಯ ಗುಣಗಳು ಎಲ್ಲಾ ವರ್ಗದವರನ್ನು ಆಕರ್ಷಸುತ್ತವೆ. ಸತ್ಕರ್ಮಗಳು ಸತ್ಫಲಗಳನ್ನೇ ನೀಡುತ್ತವೆ. ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು’ ಎಂದು ತಿಳಿಸಿದರು.</p>.<p>‘ಬೌದ್ಧ ಧರ್ಮವು ದೈವದ ಕಲ್ಪನೆಯನ್ನು ಪುಷ್ಟೀಕರಿಸುವುದಿಲ್ಲ. ದೇವರ ಬಳಿಯ ಕೋರಿಕೆ ಹಾಗೂ ಬೇಡಿಕೆ ತಿರಸ್ಕಾರವಾದರೆ ನೋವು ಸೃಷ್ಟಿಯಾಗಿ ದೇಹ, ಮನಸ್ಸು ಬಾಧಿತವಾಗುವ ಸಂಭವವಿದೆ. ನಿರೀಕ್ಷೆರಹಿತ ಕೊಡುಗೆಗಳು ನಮ್ಮ ಸಮಾಜ ಹಾಗೂ ನೆರೆ ಹೊರೆಯವರಲ್ಲಿ ಸಹಿಷ್ಣುತೆ, ಸಹ ಬಾಳ್ವೆಯನ್ನು ತರುತ್ತವೆ’ ಎಂದರು.</p>.<p>ಪಿವಿಪಿ ಟ್ರಸ್ಟ್ ಕಾರ್ಯದರ್ಶಿ ಎಂ. ಮಹದೇವ್ ಮಾತನಾಡಿ, ಐದು ವರ್ಷಗಳ ಸತತ ಪರಿಶ್ರಮದ ಫಲವಾಗಿ ಬುದ್ಧ ಪ್ರತಿಮೆ ಅನಾವರಣಗೊಂಡಿದೆ ಎಂದರು.</p>.<p>ಪ್ರತಿಮೆ ರಚನೆಯ ರೂವಾರಿಗಳಾದ ರಾಮು ಎಸ್. ನಾಯಕ್ ಹಾಗೂ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.</p>.<p>ಬೌದ್ಧ ಬಿಕ್ಕು ಕಸ್ಸಪ ಮಹಾತೇರ, ಪಿವಿಪಿ ಟ್ರಸ್ಟ್ ಅಧ್ಯಕ್ಷ ಎಸ್.ಮರಿಸ್ವಾಮಿ, ಖಜಾಂಚಿ ಮತ್ತು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಟ್ರಸ್ಟಿ ಶಿವಮಲ್ಲು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಗೇರಿ</strong>: ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಗೌತಮ ಬುದ್ಧನ ಏಕಶಿಲಾ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.</p>.<p>ಬ್ರಿಟಿಷ್ ಮೂಲದ ಬೌದ್ಧ ಬಿಕ್ಕು ಅಜಾನ್ ಜಯಸಾರೋ ಮಹಾತೇರ ಅವರು ಬುದ್ಧ ಬೋಧನೆಗಳ ಪಠಣದೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದರು. ನೂರಾರು ಬೌದ್ಧ ಬಿಕ್ಕುಗಳು ಸಂಭ್ರಮಕ್ಕೆ ಸಾಕ್ಷಿಯಾದರು.</p>.<p>ಅಜಾನ್ ಜಯಸಾರೋ ಮಹಾತೇರ ಮಾತನಾಡಿ, ‘ಸ್ಥಾಪಿತ ಸಂಪ್ರದಾಯ ಹಾಗೂ ಆಚರಣೆಗಳನ್ನು ಪಾಲನೆ ಮಾಡುವ ಧರ್ಮಗಳ ನಡುವೆ ನೈಜ ಕರ್ಮಸಿದ್ದಾಂತ ಪ್ರತಿಪಾದನೆಗೆ ಒತ್ತು ನೀಡಿದ ಬೌದ್ಧ ಧರ್ಮ, ಜಾಗತಿಕ ಮತವಾಗಿ ರೂಪುಗೊಂಡಿದೆ’ ಎಂದು ಹೇಳಿದರು.</p>.<p>‘ನರಮೇಧ ನಡೆಸಿ, ಹಿಂಸೆ, ಹೇರಿಕೆಯಿಂದ ಮತವನ್ನು ಸದೃಢಗೊಳಿಸಲು, ವಿಸ್ತರಿಸಲು ಸಾಧ್ಯವಿಲ್ಲ. ಅಂತಹ ನಡೆ ದೀರ್ಘಕಾಲದವರೆಗೆ ಫಲ ನೀಡುವುದಿಲ್ಲ. ಶಾಂತಿ ಹಾಗೂ ಮಾನವೀಯ ಮೌಲ್ಯ ಗುಣಗಳು ಎಲ್ಲಾ ವರ್ಗದವರನ್ನು ಆಕರ್ಷಸುತ್ತವೆ. ಸತ್ಕರ್ಮಗಳು ಸತ್ಫಲಗಳನ್ನೇ ನೀಡುತ್ತವೆ. ನಮ್ಮ ಭವಿಷ್ಯಕ್ಕೆ ನಾವೇ ಜವಾಬ್ದಾರರು’ ಎಂದು ತಿಳಿಸಿದರು.</p>.<p>‘ಬೌದ್ಧ ಧರ್ಮವು ದೈವದ ಕಲ್ಪನೆಯನ್ನು ಪುಷ್ಟೀಕರಿಸುವುದಿಲ್ಲ. ದೇವರ ಬಳಿಯ ಕೋರಿಕೆ ಹಾಗೂ ಬೇಡಿಕೆ ತಿರಸ್ಕಾರವಾದರೆ ನೋವು ಸೃಷ್ಟಿಯಾಗಿ ದೇಹ, ಮನಸ್ಸು ಬಾಧಿತವಾಗುವ ಸಂಭವವಿದೆ. ನಿರೀಕ್ಷೆರಹಿತ ಕೊಡುಗೆಗಳು ನಮ್ಮ ಸಮಾಜ ಹಾಗೂ ನೆರೆ ಹೊರೆಯವರಲ್ಲಿ ಸಹಿಷ್ಣುತೆ, ಸಹ ಬಾಳ್ವೆಯನ್ನು ತರುತ್ತವೆ’ ಎಂದರು.</p>.<p>ಪಿವಿಪಿ ಟ್ರಸ್ಟ್ ಕಾರ್ಯದರ್ಶಿ ಎಂ. ಮಹದೇವ್ ಮಾತನಾಡಿ, ಐದು ವರ್ಷಗಳ ಸತತ ಪರಿಶ್ರಮದ ಫಲವಾಗಿ ಬುದ್ಧ ಪ್ರತಿಮೆ ಅನಾವರಣಗೊಂಡಿದೆ ಎಂದರು.</p>.<p>ಪ್ರತಿಮೆ ರಚನೆಯ ರೂವಾರಿಗಳಾದ ರಾಮು ಎಸ್. ನಾಯಕ್ ಹಾಗೂ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.</p>.<p>ಬೌದ್ಧ ಬಿಕ್ಕು ಕಸ್ಸಪ ಮಹಾತೇರ, ಪಿವಿಪಿ ಟ್ರಸ್ಟ್ ಅಧ್ಯಕ್ಷ ಎಸ್.ಮರಿಸ್ವಾಮಿ, ಖಜಾಂಚಿ ಮತ್ತು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಟ್ರಸ್ಟಿ ಶಿವಮಲ್ಲು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>