<p><strong>ಬೆಂಗಳೂರು:</strong> ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳಾಲ ಕೆರೆ ನೀರನ್ನು ಪಕ್ಕದ ಉದ್ಯಾನ ಪೋಷಣೆಗೆ ಬಳಸಲಾಗುತ್ತಿದ್ದು, ಇದರಿಂದಾಗಿ ಕೆರೆ ನೀರು ಬರಿದಾಗುವ ಆತಂಕ ಎದುರಾಗಿದೆ.</p>.<p>ಈ ಕೆರೆಯು 15 ಎಕರೆ 16 ಗುಂಟೆ ವಿಸ್ತಾರ ಹೊಂದಿದೆ. ಆದರೆ, 7 ಎಕರೆ ಪ್ರದೇಶದಲ್ಲಿ ಮಾತ್ರ ನೀರು ನಿಲ್ಲುತ್ತದೆ.</p>.<p>ಈ ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಇದರ ಪಕ್ಕದಲ್ಲಿ ಉದ್ಯಾನ ನಿರ್ಮಿಸಿ, ಗಿಡಮರಗಳನ್ನು ಬೆಳೆಸಿದೆ. ಉದ್ಯಾನದ ನಿರ್ವಹಣೆಯ ಹೊಣೆಯನ್ನು ಸರ್ಕಾರೇತರ ಸಂಸ್ಥೆಯೊಂದು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳಿಂದ ಪಂಪ್ಸೆಟ್ ಮೂಲಕ ಕೆರೆಯ ನೀರನ್ನು ಈ ಸಲುವಾಗಿ ಬಳಸಿಕೊಳ್ಳುತ್ತಿದೆ.</p>.<p>ಈ ಕೆರೆ ಅಭಿವೃದ್ಧಿ ಪಡಿಸಿದ ಬಳಿಕ ಮಳೆ ನೀರೂ ಸೇರದಂತೆ ಮಾಡಲಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಕೆರೆ ತುಂಬಿರಲಿಲ್ಲ. ನಿತ್ಯವೂ ನೀರೆತ್ತಿದರೆ ಜಲಚರಗಳಿಗೆ ಸಂಚಕಾರ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.</p>.<p>‘ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಅಸ್ತಿತ್ವಕ್ಕೆ ತಕ್ಕೆ ತರುವ ಕೆಲಸ ನಡೆದಿದೆ. ಕೆರೆ ಬರಿದಾಗುವುದನ್ನು ತಡೆಯುವಂತೆ ಕೋರಿ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜಣ್ಣ ತಿಳಿಸಿದರು.</p>.<p>‘ನೀರು ಖಾಲಿಯಾದ್ದರಿಂದ ವಲಸೆ ಹಕ್ಕಿಗಳು ಸಹ ತಮ್ಮ ಆವಾಸಸ್ಥಾನಗಳನ್ನು ಬದಲಿಸಿಕೊಂಡಿವೆ. ಮೊದಲು ಬರುತ್ತಿದ್ದ ಹಕ್ಕಿಗಳು ಈಗ ಬರುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳಾಲ ಕೆರೆ ನೀರನ್ನು ಪಕ್ಕದ ಉದ್ಯಾನ ಪೋಷಣೆಗೆ ಬಳಸಲಾಗುತ್ತಿದ್ದು, ಇದರಿಂದಾಗಿ ಕೆರೆ ನೀರು ಬರಿದಾಗುವ ಆತಂಕ ಎದುರಾಗಿದೆ.</p>.<p>ಈ ಕೆರೆಯು 15 ಎಕರೆ 16 ಗುಂಟೆ ವಿಸ್ತಾರ ಹೊಂದಿದೆ. ಆದರೆ, 7 ಎಕರೆ ಪ್ರದೇಶದಲ್ಲಿ ಮಾತ್ರ ನೀರು ನಿಲ್ಲುತ್ತದೆ.</p>.<p>ಈ ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿಪಡಿಸಿದೆ. ಇದರ ಪಕ್ಕದಲ್ಲಿ ಉದ್ಯಾನ ನಿರ್ಮಿಸಿ, ಗಿಡಮರಗಳನ್ನು ಬೆಳೆಸಿದೆ. ಉದ್ಯಾನದ ನಿರ್ವಹಣೆಯ ಹೊಣೆಯನ್ನು ಸರ್ಕಾರೇತರ ಸಂಸ್ಥೆಯೊಂದು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳಿಂದ ಪಂಪ್ಸೆಟ್ ಮೂಲಕ ಕೆರೆಯ ನೀರನ್ನು ಈ ಸಲುವಾಗಿ ಬಳಸಿಕೊಳ್ಳುತ್ತಿದೆ.</p>.<p>ಈ ಕೆರೆ ಅಭಿವೃದ್ಧಿ ಪಡಿಸಿದ ಬಳಿಕ ಮಳೆ ನೀರೂ ಸೇರದಂತೆ ಮಾಡಲಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಕೆರೆ ತುಂಬಿರಲಿಲ್ಲ. ನಿತ್ಯವೂ ನೀರೆತ್ತಿದರೆ ಜಲಚರಗಳಿಗೆ ಸಂಚಕಾರ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.</p>.<p>‘ಅಭಿವೃದ್ಧಿಯ ಹೆಸರಿನಲ್ಲಿ ಕೆರೆಯ ಅಸ್ತಿತ್ವಕ್ಕೆ ತಕ್ಕೆ ತರುವ ಕೆಲಸ ನಡೆದಿದೆ. ಕೆರೆ ಬರಿದಾಗುವುದನ್ನು ತಡೆಯುವಂತೆ ಕೋರಿ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜಣ್ಣ ತಿಳಿಸಿದರು.</p>.<p>‘ನೀರು ಖಾಲಿಯಾದ್ದರಿಂದ ವಲಸೆ ಹಕ್ಕಿಗಳು ಸಹ ತಮ್ಮ ಆವಾಸಸ್ಥಾನಗಳನ್ನು ಬದಲಿಸಿಕೊಂಡಿವೆ. ಮೊದಲು ಬರುತ್ತಿದ್ದ ಹಕ್ಕಿಗಳು ಈಗ ಬರುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>