ಶಶಿಕಲಾಳ ಶೀಲ ಶಂಕಿಸಿ ವೆಂಕಟಗಿರಿಯಪ್ಪ ಶನಿವಾರ ನಸುಕಿನ ಎರಡು ಗಂಟೆ ಸುಮಾರಿಗೆ ಜಗಳ ಮಾಡಿದ್ದಾನೆ. ಮನೆಯಲ್ಲಿ ಜೋರಾಗಿ ಶಬ್ದ ಕೇಳಿದ ತಕ್ಷಣ ಮನೆಯ ಮಾಲೀಕರು ಆರೋಪಿಯ ಮನೆಗೆ ತೆರಳಿ ಬಾಗಿಲು ತೆಗೆಯುವಂತೆ ಸೂಚಿಸಿದ್ದರು. ಎಷ್ಟೂ ಕೂಗಿದರೂ ಆರೋಪಿ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ, ಕಿಟಕಿ ಮೂಲಕ ಸ್ಥಳೀಯರು ಮತ್ತು ಮನೆ ಮಾಲೀಕರು ನೋಡಿದಾಗ ಆರೋಪಿ, ಶಶಿಕಲಾ ಕತ್ತು ಹಿಸುಕುತ್ತಿದ್ದ. ತಕ್ಷಣ ಸ್ಥಳೀಯರು ಕೂಗಾಡುತ್ತಾ, ಆಕೆಯನ್ನು ಬಿಡುವಂತೆ ಮನವಿ ಮಾಡಿದ್ದಾರೆ.