‘ಸೆ. 21ರಂದು ಬೆಳಿಗ್ಗೆ ಗಂಗಮ್ಮ ಮೊಬೈಲ್ಗೆ ಪುತ್ರಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಶಿವಕುಮಾರ್, ‘ಗಂಗಮ್ಮ ಅವರು ಪರಿಚಯಸ್ಥರನ್ನು ಆಸ್ಪತ್ರೆಗೆ ದಾಖಲಿಸಲು ಹೋಗಿದ್ದಾರೆ’ ಎಂದು ಹೇಳಿದ್ದ. ಸಂಜೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಪುತ್ರಿ, ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದರು. ‘ಶಿವಕುಮಾರ್ ಮನೆ ಕೀ ಕೊಟ್ಟು ಹೋಗಿದ್ದಾನೆ’ ಎಂದು ಪಕ್ಕದ ಮನೆಯವರು ತಿಳಿಸಿದ್ದರು’ ಎಂದೂ ಪೊಲೀಸರು ವಿವರಿಸಿದರು.