ಎಚ್.ಗೊಲ್ಲಹಳ್ಳಿಯ ದೊಡ್ಡಬೆಲೆ, ಚಿಕ್ಕೇಗೌಡನಪಾಳ್ಯದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಲ್ಲಿ ಕೆರೆಕುಂಟೆ, ಗೋಕುಂಟೆ ನಿರ್ಮಾಣ, ಸ್ವಾತಂತ್ರ್ಯ ಚಳುವಳಿ ಭಾಗವಹಿಸಿದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಿಮ್ಮ ಮನೆಯ ಮಗ ನಾನು. ನನಗೆ ಒಮ್ಮೆ ಅವಕಾಶ ನೀಡಿದರೆ ಕೆರೆಗಳಿಗೆ ನೀರು ತುಂಬಿಸುತ್ತೇನೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇನೆ’ ಎಂದು ಕೋರಿದರು.