ಹೊಯ್ಸಳ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ‘ಕಲಾ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅನಂತ ಅವಕಾಶಗಳಿವೆ. ಪದವಿ ಪೂರ್ವದ ಹಂತ ಕನಸುಗಳ ಮುನ್ನುಡಿ. ಜೀವನ ರಂಗಮಂದಿರವಿದ್ದಂತೆ. ಒಂದೇ ಪ್ರವೇಶ, ಒಂದೇ ನಿರ್ಗಮನ ಜಾಗೃತರಾಗಿ ಹೆಜ್ಜೆ ಇಡಬೇಕು ಎಂದರು.