<p><strong>ಹೊಸಕೋಟೆ</strong>: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್ಸಿಎಲ್ ಸಿದ್ಧತೆ ಆರಂಭಿಸಿದೆ.</p>.<p>ಹೊಸಕೋಟೆಗೆ ಒಟ್ಟು 16.3 ಕಿ.ಮೀ. ಉದ್ದದ ಮೆಟ್ರೊ ಮಾರ್ಗದಲ್ಲಿ 11 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೆಟ್ರೊ ಸಂಚರಿಸಲಿದೆ. </p>.<p>ಕೋಲಾರ ಜಿಲ್ಲೆ, ಚಿಂತಾಮಣಿ ಹಾಗೂ ಮಾಲೂರು ಜನತೆ ಬೆಂಗಳೂರಿಗೆ ತೆರಳಲು ಹೊಸಕೋಟೆ ರಸ್ತೆಯನ್ನು ಅವಲಂಬಿಸಿದ್ದಾರೆ. ಹೊಸಕೋಟೆವರೆಗೂ ಮೆಟ್ರೊ ಮಾರ್ಗ ಶುರುವಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. </p>.<p>ಹೊಸಕೋಟೆಗೆ ಮೆಟ್ರೊ ಕಾರಿಡಾರ್ ಬೇಕು ಎಂಬ ಜನರ ಬಹಳ ದಿನಗಳ ಕನಸು ಶೀಘ ನನಸಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು. ಶೀಘ್ರದಲ್ಲಿಯೇ ಯೋಜನೆಯ ಸಮಗ್ರ ಮಾಹಿತಿ ಒದಗಿಸುವುದಾಗಿ ಅವರು ಹೇಳಿದರು.</p>.<p><strong>ಸದನದಲ್ಲಿ ಒಪ್ಪಿಗೆ: </strong></p><p>ಮೆಟ್ರೊ ಯೋಜನೆಯ ಬಗ್ಗೆ ಸದನಲ್ಲಿಯೂ ಧ್ವನಿ ಎತ್ತಲಾಗಿತ್ತು. ಕೆ.ಆರ್.ಪುರಂನಿಂದ ಹೊಸಕೋಟೆವರೆಗಿನ ಮೆಟ್ರೊ ಗುಲಾಬಿ ಮಾರ್ಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ. ಸದ್ಯ ಮಾರ್ಗದ ಸಿದ್ಧತೆ ನೀಲನಕ್ಷೆ ರೂಪಿಸಲಾಗಿದ್ದು, ಮಾರ್ಗದ ವಿಸ್ತರಣೆ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದರು.</p>.<p><strong>ಎಲ್ಲೆಲ್ಲಿ ನಿಲ್ದಾಣ? </strong></p><p>ಕೆ.ಅರ್.ಪುರಂ ಐಟಿಐ ಭವನ ಟಿಸಿಪಾಳ್ಯ ಭಟ್ಟರಹಳ್ಳಿ ಜಂಕ್ಷನ್ ಮೇಡಹಳ್ಳಿ ಜಂಕ್ಷನ್ ಆವಲಹಳ್ಳಿ ಬೂದಿಗೆರೆ ಕ್ರಾಸ್ ಕಾಟಂನಲ್ಲೂರು ಗೇಟ್ ಹೊಸಕೋಟೆ ಟೋಲ್ ಪ್ಲಾಜಾ ಕೆಇಬಿ ಸರ್ಕಲ್ ಹೊಸಕೋಟೆ ಸರ್ಕಾರಿ ಅಸ್ಪತ್ರೆ ಸೇರಿದಂತೆ 11 ನಿಲ್ದಾಣ ಗುರುತಿಸಲಾಗಿದೆ ಎಂದು ಶಾಸಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ</strong>: ಬೆಂಗಳೂರಿನ ಕೃಷ್ಣರಾಜಪುರದಿಂದ ಹೊಸಕೋಟೆವರೆಗೂ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ ವಿಸ್ತರಣೆಗೆ ಯೋಜನೆಯ ನೀಲನಕ್ಷೆ ಬಹುತೇಕ ಪೂರ್ಣಗೊಂಡಿದೆ. ಬಿಎಂಅರ್ಸಿಎಲ್ ಸಿದ್ಧತೆ ಆರಂಭಿಸಿದೆ.</p>.<p>ಹೊಸಕೋಟೆಗೆ ಒಟ್ಟು 16.3 ಕಿ.ಮೀ. ಉದ್ದದ ಮೆಟ್ರೊ ಮಾರ್ಗದಲ್ಲಿ 11 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೆಟ್ರೊ ಸಂಚರಿಸಲಿದೆ. </p>.<p>ಕೋಲಾರ ಜಿಲ್ಲೆ, ಚಿಂತಾಮಣಿ ಹಾಗೂ ಮಾಲೂರು ಜನತೆ ಬೆಂಗಳೂರಿಗೆ ತೆರಳಲು ಹೊಸಕೋಟೆ ರಸ್ತೆಯನ್ನು ಅವಲಂಬಿಸಿದ್ದಾರೆ. ಹೊಸಕೋಟೆವರೆಗೂ ಮೆಟ್ರೊ ಮಾರ್ಗ ಶುರುವಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. </p>.<p>ಹೊಸಕೋಟೆಗೆ ಮೆಟ್ರೊ ಕಾರಿಡಾರ್ ಬೇಕು ಎಂಬ ಜನರ ಬಹಳ ದಿನಗಳ ಕನಸು ಶೀಘ ನನಸಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು. ಶೀಘ್ರದಲ್ಲಿಯೇ ಯೋಜನೆಯ ಸಮಗ್ರ ಮಾಹಿತಿ ಒದಗಿಸುವುದಾಗಿ ಅವರು ಹೇಳಿದರು.</p>.<p><strong>ಸದನದಲ್ಲಿ ಒಪ್ಪಿಗೆ: </strong></p><p>ಮೆಟ್ರೊ ಯೋಜನೆಯ ಬಗ್ಗೆ ಸದನಲ್ಲಿಯೂ ಧ್ವನಿ ಎತ್ತಲಾಗಿತ್ತು. ಕೆ.ಆರ್.ಪುರಂನಿಂದ ಹೊಸಕೋಟೆವರೆಗಿನ ಮೆಟ್ರೊ ಗುಲಾಬಿ ಮಾರ್ಗಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ. ಸದ್ಯ ಮಾರ್ಗದ ಸಿದ್ಧತೆ ನೀಲನಕ್ಷೆ ರೂಪಿಸಲಾಗಿದ್ದು, ಮಾರ್ಗದ ವಿಸ್ತರಣೆ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದರು.</p>.<p><strong>ಎಲ್ಲೆಲ್ಲಿ ನಿಲ್ದಾಣ? </strong></p><p>ಕೆ.ಅರ್.ಪುರಂ ಐಟಿಐ ಭವನ ಟಿಸಿಪಾಳ್ಯ ಭಟ್ಟರಹಳ್ಳಿ ಜಂಕ್ಷನ್ ಮೇಡಹಳ್ಳಿ ಜಂಕ್ಷನ್ ಆವಲಹಳ್ಳಿ ಬೂದಿಗೆರೆ ಕ್ರಾಸ್ ಕಾಟಂನಲ್ಲೂರು ಗೇಟ್ ಹೊಸಕೋಟೆ ಟೋಲ್ ಪ್ಲಾಜಾ ಕೆಇಬಿ ಸರ್ಕಲ್ ಹೊಸಕೋಟೆ ಸರ್ಕಾರಿ ಅಸ್ಪತ್ರೆ ಸೇರಿದಂತೆ 11 ನಿಲ್ದಾಣ ಗುರುತಿಸಲಾಗಿದೆ ಎಂದು ಶಾಸಕರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>