<p><strong>ಬೆಂಗಳೂರು</strong>: ‘ನಮ್ಮ ಮೆಟ್ರೊ’ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ (ರೀಚ್ 4ಬಿ) ರೈಲಿನ ವಾಣಿಜ್ಯ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಇದೇ 18 ಮತ್ತು 19ರಂದು ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಅವರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಈ ಮಾರ್ಗದಲ್ಲಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ.</p>.<p>‘ಆಯುಕ್ತರ ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ಈ ತಿಂಗಳಾಂತ್ಯಕ್ಕೆೆ ಚಾಲನೆ ಕೂಡ ದೊರೆಯಲಿದೆ’ ಎಂದು ನಿಗಮದ ಮೂಲಗಳು ಹೇಳಿವೆ.</p>.<p>ಈ ಮಾರ್ಗದ ನಿಲ್ದಾಣದಲ್ಲಿನ ಮೂಲಸೌಕರ್ಯ, ಸಿವಿಲ್ ಕಾಮಗಾರಿ, ಸಿಗ್ನಲಿಂಗ್, ದೂರಸಂವಹನ ಸಂಪರ್ಕ ವ್ಯವಸ್ಥೆ ಮತ್ತು ಇನ್ನಿತರ ವ್ಯವಸ್ಥೆಯ ಬಗ್ಗೆ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿದೆ.</p>.<p>‘ಈ ತಿಂಗಳ ಮೊದಲ ವಾರದಲ್ಲಿ ಸಿಎಂಆರ್ಎಸ್ ತಂಡ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆೆ ಭೇಟಿ ನೀಡಿತ್ತು. 6.29 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಸುದೀರ್ಘ ಮಾಹಿತಿಯನ್ನು ನಿಗಮದ ಎಂಜಿನಿಯರ್ಗಳು ನೀಡಿದ್ದರು. ತದನಂತರ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ಸೂಚಿಸುವುದಾಗಿ ಸಿಎಂಆರ್ಎಸ್ ತಂಡ ಹೇಳಿತ್ತು’ ಎಂದು ತಿಳಿಸಿವೆ.</p>.<p>ನ. 1ಕ್ಕೆ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿತ್ತು. ಆದರೆ, ತಾಂತ್ರಿಕ ಕಾರಣಗಳು ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಇದ್ದುದರಿಂದ ಸಿಎಂಆರ್ಎಸ್ಗೆ ಆಹ್ವಾನ ನೀಡುವುದು ತಡವಾಗಿತ್ತು.</p>.<p><strong>ಭಾಗಶಃ ಸಂಚಾರ ಸ್ಥಗಿತ</strong></p>.<p>ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಿಗದಿಯಾಗಿರುವುದರಿಂದ ಮತ್ತು ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪೂರ್ವಸಿದ್ಧತೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಹಸಿರು ಮಾರ್ಗದ ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವೆ ನ. 17ರಿಂದ 19ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>17ರ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ಸೇವೆ ಇರಲಿದೆ. ನ. 20ರಂದು ಎಂದಿನಂತೆ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸೇವೆ ಪುನರಾರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ.</p>.<p><strong>ರೀಚ್ 4ಬಿ ಮಾರ್ಗದ ನಿಲ್ದಾಣಗಳು</strong></p>.<p>ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ಷಿಪ್</p>.<p><strong>ನಮ್ಮ ಮೆಟ್ರೊ ವಿಸ್ತರಿಸಿದ ಮಾರ್ಗ ರೀಚ್-4ಬಿ</strong></p>.<p>ಯಲಚೇನಹಳ್ಳಿ-ಅಂಜನಾಪುರ</p>.<p>ಮಾರ್ಗದ ಉದ್ದ: 6.29 ಕಿ.ಮೀ.</p>.<p>ಸ್ವಾಧೀನಪಡಿಸಿಕೊಂಡಿರುವ ಭೂಮಿ: 71,890 ಚದರ ಮೀಟರ್</p>.<p>ಒಟ್ಟು ನಿಲ್ದಾಣಗಳು 5</p>.<p>ಮಾರ್ಗದ ಯೋಜನಾ ವೆಚ್ಚ: ₹1,765 ಕೋಟಿ</p>.<p>ಸಿವಿಲ್ ಕಾಮಗಾರಿ ಯೋಜನೆ ವೆಚ್ಚ: ₹508.86 ಕೋಟಿ</p>.<p>ಗುತ್ತಿಗೆ ಪಡೆದಿರುವ ಕಂಪನಿ: ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ (ಎನ್ಸಿಸಿ) ಲಿಮಿಟೆಡ್</p>.<p>ಕಾಮಗಾರಿ ಆರಂಭ: 2016ರ ಮೇ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ನಮ್ಮ ಮೆಟ್ರೊ’ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿತ ಮಾರ್ಗದಲ್ಲಿ (ರೀಚ್ 4ಬಿ) ರೈಲಿನ ವಾಣಿಜ್ಯ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಇದೇ 18 ಮತ್ತು 19ರಂದು ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ. ಅವರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ಈ ಮಾರ್ಗದಲ್ಲಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ.</p>.<p>‘ಆಯುಕ್ತರ ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ಈ ತಿಂಗಳಾಂತ್ಯಕ್ಕೆೆ ಚಾಲನೆ ಕೂಡ ದೊರೆಯಲಿದೆ’ ಎಂದು ನಿಗಮದ ಮೂಲಗಳು ಹೇಳಿವೆ.</p>.<p>ಈ ಮಾರ್ಗದ ನಿಲ್ದಾಣದಲ್ಲಿನ ಮೂಲಸೌಕರ್ಯ, ಸಿವಿಲ್ ಕಾಮಗಾರಿ, ಸಿಗ್ನಲಿಂಗ್, ದೂರಸಂವಹನ ಸಂಪರ್ಕ ವ್ಯವಸ್ಥೆ ಮತ್ತು ಇನ್ನಿತರ ವ್ಯವಸ್ಥೆಯ ಬಗ್ಗೆ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿದೆ.</p>.<p>‘ಈ ತಿಂಗಳ ಮೊದಲ ವಾರದಲ್ಲಿ ಸಿಎಂಆರ್ಎಸ್ ತಂಡ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆೆ ಭೇಟಿ ನೀಡಿತ್ತು. 6.29 ಕಿ.ಮೀ. ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಸುದೀರ್ಘ ಮಾಹಿತಿಯನ್ನು ನಿಗಮದ ಎಂಜಿನಿಯರ್ಗಳು ನೀಡಿದ್ದರು. ತದನಂತರ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ಸೂಚಿಸುವುದಾಗಿ ಸಿಎಂಆರ್ಎಸ್ ತಂಡ ಹೇಳಿತ್ತು’ ಎಂದು ತಿಳಿಸಿವೆ.</p>.<p>ನ. 1ಕ್ಕೆ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್ಸಿಎಲ್ ಹೊಂದಿತ್ತು. ಆದರೆ, ತಾಂತ್ರಿಕ ಕಾರಣಗಳು ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳು ಇನ್ನೂ ಬಾಕಿ ಇದ್ದುದರಿಂದ ಸಿಎಂಆರ್ಎಸ್ಗೆ ಆಹ್ವಾನ ನೀಡುವುದು ತಡವಾಗಿತ್ತು.</p>.<p><strong>ಭಾಗಶಃ ಸಂಚಾರ ಸ್ಥಗಿತ</strong></p>.<p>ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಿಗದಿಯಾಗಿರುವುದರಿಂದ ಮತ್ತು ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪೂರ್ವಸಿದ್ಧತೆ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಹಸಿರು ಮಾರ್ಗದ ಆರ್.ವಿ. ರಸ್ತೆ-ಯಲಚೇನಹಳ್ಳಿ ನಡುವೆ ನ. 17ರಿಂದ 19ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>17ರ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ಸೇವೆ ಇರಲಿದೆ. ನ. 20ರಂದು ಎಂದಿನಂತೆ ನಾಗಸಂದ್ರ-ಯಲಚೇನಹಳ್ಳಿ ನಡುವೆ ಸೇವೆ ಪುನರಾರಂಭಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ತಿಳಿಸಿದೆ.</p>.<p><strong>ರೀಚ್ 4ಬಿ ಮಾರ್ಗದ ನಿಲ್ದಾಣಗಳು</strong></p>.<p>ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ಷಿಪ್</p>.<p><strong>ನಮ್ಮ ಮೆಟ್ರೊ ವಿಸ್ತರಿಸಿದ ಮಾರ್ಗ ರೀಚ್-4ಬಿ</strong></p>.<p>ಯಲಚೇನಹಳ್ಳಿ-ಅಂಜನಾಪುರ</p>.<p>ಮಾರ್ಗದ ಉದ್ದ: 6.29 ಕಿ.ಮೀ.</p>.<p>ಸ್ವಾಧೀನಪಡಿಸಿಕೊಂಡಿರುವ ಭೂಮಿ: 71,890 ಚದರ ಮೀಟರ್</p>.<p>ಒಟ್ಟು ನಿಲ್ದಾಣಗಳು 5</p>.<p>ಮಾರ್ಗದ ಯೋಜನಾ ವೆಚ್ಚ: ₹1,765 ಕೋಟಿ</p>.<p>ಸಿವಿಲ್ ಕಾಮಗಾರಿ ಯೋಜನೆ ವೆಚ್ಚ: ₹508.86 ಕೋಟಿ</p>.<p>ಗುತ್ತಿಗೆ ಪಡೆದಿರುವ ಕಂಪನಿ: ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ (ಎನ್ಸಿಸಿ) ಲಿಮಿಟೆಡ್</p>.<p>ಕಾಮಗಾರಿ ಆರಂಭ: 2016ರ ಮೇ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>