ಸಂಸ್ಥೆಯ ಗೌರವ ಕಾರ್ಯದರ್ಶಿಅರಕಲಿ ವೆಂಕಟೇಶ್ ಪ್ರಸಾದ್, ‘ಈ ಆರ್ಟ್ ಗ್ಯಾಲರಿಯು ಜಗತ್ತಿನ ವಿವಿಧ ಕಲಾ ಪ್ರಕಾರಗಳನ್ನು ಬೆಂಗಳೂರಿಗರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ. ನಗರ ಕೇಂದ್ರಭಾಗದಲ್ಲಿರುವ ಈ ಸ್ಥಳ ಹಸಿರು ಸಿರಿಯಿಂದ ಕೂಡಿದೆ. ಇಲ್ಲಿ ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇಲ್ಲಿಗೆ ಸುಲಭವಾಗಿ ಬರಲು ಸಾರಿಗೆ ಸಂಪರ್ಕವೂ ಇದೆ’ ಎಂದರು.