ಬಂಧಿತ ಆರೋಪಿಗಳು, 'ಕುರಾನ್ ಸರ್ಕಲ್' ಎಂಬ ಗುಂಪು ರಚಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು. ನಗರದಲ್ಲಿರುವ ಯುವಕರನ್ನು ಸೆಳೆದು, ಅವರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಜೊತೆಯೂ ಆರೋಪಿಗಳ ನಂಟಿದ್ದ ಮಾಹಿತಿ ಎನ್ಐಎಗೆ ಲಭ್ಯವಾಗಿತ್ತು. ಬೆಂಗಳೂರು ಹಾಗೂ ಇತರೆಡೆ ಭಯೋತ್ಪಾದಕ ಕೃತ್ಯ ಎಸಗುವುದು ಆರೋಪಿಗಳ ಉದ್ದೇಶವಾಗಿತ್ತು.