<p><strong>ಬೆಂಗಳೂರು: </strong>ಬಾಣಸವಾಡಿ ಸಮೀಪದ ಒಎಂಬಿಆರ್ ಬಡಾವಣೆಯ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ 20 ದಿನಗಳಿಂದ ಕೊಳಚೆ ಮಿಶ್ರಿತ ನೀರು ಸರಬರಾಜು ಆಗುತ್ತಿದೆ.</p>.<p>ಸರಿಸುಮಾರು 500 ಮನೆಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದ್ದರೂ, ನೀರಿನ ಕೊಳವೆ ಎಲ್ಲಿ ಒಡೆದಿದೆ ಎಂದು ಕಂಡುಹಿಡಿದು, ಅದನ್ನು ಸರಿಪಡಿಸಲು ಜಲಮಂಡಳಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಈ ಸಮಸ್ಯೆ ತಲೆದೊರಿದ ಬಳಿಕ ಟ್ಯಾಂಕರ್ಗಳ ಮೂಲಕ ಉಚಿತ ನೀರು ಪೂರೈಕೆಗೆ ಮಂಡಳಿ ವ್ಯವಸ್ಥೆ ಮಾಡಿದೆ. ಅದು ಸಹ ಎಲ್ಲ ಮನೆಗಳಿಗೆ ತಲುಪುತ್ತಿಲ್ಲ ಎಂಬುದು ಜನರ ಆರೋಪ.</p>.<p>ಕೊಳಚೆ ನೀರು ಎಲ್ಲಿಂದ ಸೇರುತ್ತಿದೆ ಎಂದು ಕಂಡುಹಿಡಿಯಲು ಮಂಡಳಿಯ ಸಿಬ್ಬಂದಿ 22 ಕಡೆ ನೆಲ ಅಗೆದಿದ್ದಾರೆ. ಆದರೆ, ಕಲುಷಿತ ನೀರು ಕೊಳವೆಗೆ ಸೇರುವ ಜಾಗ ಗುರುತಿಸಲಾಗಿಲ್ಲ.</p>.<p>ಇದರಿಂದಾಗಿ ನೀರಿನ ಕೊರತೆ ಉಂಟಾಗಿದ್ದು, ಪ್ರದೇಶದ ವಾಸಿಗಳು ದುಬಾರಿಯಾಗಿರುವ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ‘ಆಡಳಿತ ವ್ಯವಸ್ಥೆ ಪ್ರದೇಶದ ಮೂಲಸೌಕರ್ಯಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿರುವ ಸ್ಥಳೀಯರು ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.</p>.<p>‘ನಾಲ್ಕು ವಾರಗಳ ಹಿಂದಿನಿಂದಲೂ ವಾಸನೆಯುಕ್ತ ಕಲುಷಿತ ನೀರು ಬರುತ್ತಿದ್ದುದ್ದನ್ನು ಸ್ಥಳೀಯರು ಗಮನಿಸಿದ್ದರು’ ಎಂದು 2–ಡಿ ಅಡ್ಡರಸ್ತೆಯ ನಿವಾಸಿ ಅಂಟೊನಿ ನಿರ್ಮಲ್ ರಾಜ್ ತಿಳಿಸಿದರು.</p>.<p>‘ಕಲುಷಿತ ನೀರಿನಿಂದ ವಾಸನೆ ಸೂಸುತ್ತಿರುವ ಸಂಪ್ ಹಾಗೂ ಓವರ್ ಹೆಡ್ ಟ್ಯಾಂಕ್ಗಳನ್ನು ಶುಚಿಗೊಳಿಸಲು ಈಗ ದುಡ್ಡು ಖರ್ಚು ಮಾಡಬೇಕಿದೆ’ ಎಂದರು ಸ್ಥಳೀಯರಾದ ಅಮಿತ್ ನಿಗ್ಲಿ.</p>.<p>‘ಸಮಸ್ಯೆ ಗಮನಕ್ಕೆ ಬಂದಿದೆ. ಅದನ್ನು ತಕ್ಷಣ ಪರಿಹರಿಸುತ್ತೇವೆ. ಬಳಿಕ ಕೊಳವೆ ಮಾರ್ಗವನ್ನು ಶುಚಿಗೊಳಿಸುತ್ತೇವೆ’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಚಲಪತಿ ತಿಳಿಸಿದರು.</p>.<p>ಪ್ರದೇಶದ ಕೆಲವು ಮನೆಗಳಿಗೆ ಮಂಗಳವಾರ ಸಂಜೆಯ ಹೊತ್ತಿಗೆ ಎಂದಿನಂತೆ ನೀರು ಸರಬರಾಜು ಆರಂಭವಾಯಿತು.</p>.<p>* ಸಮಸ್ಯೆಯನ್ನು ಜಲಮಂಡಳಿ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ಇದ್ದಾರೆ ಎಂಬ ಉತ್ತರ ಬರುತ್ತಿದೆ.</p>.<p><em><strong>-ಎ.ಕೋದಂಡ ರೆಡ್ಡಿ, ಪಾಲಿಕೆ ಸದಸ್ಯ, ಬಾಣಸವಾಡಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಾಣಸವಾಡಿ ಸಮೀಪದ ಒಎಂಬಿಆರ್ ಬಡಾವಣೆಯ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ 20 ದಿನಗಳಿಂದ ಕೊಳಚೆ ಮಿಶ್ರಿತ ನೀರು ಸರಬರಾಜು ಆಗುತ್ತಿದೆ.</p>.<p>ಸರಿಸುಮಾರು 500 ಮನೆಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದ್ದರೂ, ನೀರಿನ ಕೊಳವೆ ಎಲ್ಲಿ ಒಡೆದಿದೆ ಎಂದು ಕಂಡುಹಿಡಿದು, ಅದನ್ನು ಸರಿಪಡಿಸಲು ಜಲಮಂಡಳಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.</p>.<p>ಈ ಸಮಸ್ಯೆ ತಲೆದೊರಿದ ಬಳಿಕ ಟ್ಯಾಂಕರ್ಗಳ ಮೂಲಕ ಉಚಿತ ನೀರು ಪೂರೈಕೆಗೆ ಮಂಡಳಿ ವ್ಯವಸ್ಥೆ ಮಾಡಿದೆ. ಅದು ಸಹ ಎಲ್ಲ ಮನೆಗಳಿಗೆ ತಲುಪುತ್ತಿಲ್ಲ ಎಂಬುದು ಜನರ ಆರೋಪ.</p>.<p>ಕೊಳಚೆ ನೀರು ಎಲ್ಲಿಂದ ಸೇರುತ್ತಿದೆ ಎಂದು ಕಂಡುಹಿಡಿಯಲು ಮಂಡಳಿಯ ಸಿಬ್ಬಂದಿ 22 ಕಡೆ ನೆಲ ಅಗೆದಿದ್ದಾರೆ. ಆದರೆ, ಕಲುಷಿತ ನೀರು ಕೊಳವೆಗೆ ಸೇರುವ ಜಾಗ ಗುರುತಿಸಲಾಗಿಲ್ಲ.</p>.<p>ಇದರಿಂದಾಗಿ ನೀರಿನ ಕೊರತೆ ಉಂಟಾಗಿದ್ದು, ಪ್ರದೇಶದ ವಾಸಿಗಳು ದುಬಾರಿಯಾಗಿರುವ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ‘ಆಡಳಿತ ವ್ಯವಸ್ಥೆ ಪ್ರದೇಶದ ಮೂಲಸೌಕರ್ಯಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿರುವ ಸ್ಥಳೀಯರು ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನೇ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.</p>.<p>‘ನಾಲ್ಕು ವಾರಗಳ ಹಿಂದಿನಿಂದಲೂ ವಾಸನೆಯುಕ್ತ ಕಲುಷಿತ ನೀರು ಬರುತ್ತಿದ್ದುದ್ದನ್ನು ಸ್ಥಳೀಯರು ಗಮನಿಸಿದ್ದರು’ ಎಂದು 2–ಡಿ ಅಡ್ಡರಸ್ತೆಯ ನಿವಾಸಿ ಅಂಟೊನಿ ನಿರ್ಮಲ್ ರಾಜ್ ತಿಳಿಸಿದರು.</p>.<p>‘ಕಲುಷಿತ ನೀರಿನಿಂದ ವಾಸನೆ ಸೂಸುತ್ತಿರುವ ಸಂಪ್ ಹಾಗೂ ಓವರ್ ಹೆಡ್ ಟ್ಯಾಂಕ್ಗಳನ್ನು ಶುಚಿಗೊಳಿಸಲು ಈಗ ದುಡ್ಡು ಖರ್ಚು ಮಾಡಬೇಕಿದೆ’ ಎಂದರು ಸ್ಥಳೀಯರಾದ ಅಮಿತ್ ನಿಗ್ಲಿ.</p>.<p>‘ಸಮಸ್ಯೆ ಗಮನಕ್ಕೆ ಬಂದಿದೆ. ಅದನ್ನು ತಕ್ಷಣ ಪರಿಹರಿಸುತ್ತೇವೆ. ಬಳಿಕ ಕೊಳವೆ ಮಾರ್ಗವನ್ನು ಶುಚಿಗೊಳಿಸುತ್ತೇವೆ’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಚಲಪತಿ ತಿಳಿಸಿದರು.</p>.<p>ಪ್ರದೇಶದ ಕೆಲವು ಮನೆಗಳಿಗೆ ಮಂಗಳವಾರ ಸಂಜೆಯ ಹೊತ್ತಿಗೆ ಎಂದಿನಂತೆ ನೀರು ಸರಬರಾಜು ಆರಂಭವಾಯಿತು.</p>.<p>* ಸಮಸ್ಯೆಯನ್ನು ಜಲಮಂಡಳಿ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ಇದ್ದಾರೆ ಎಂಬ ಉತ್ತರ ಬರುತ್ತಿದೆ.</p>.<p><em><strong>-ಎ.ಕೋದಂಡ ರೆಡ್ಡಿ, ಪಾಲಿಕೆ ಸದಸ್ಯ, ಬಾಣಸವಾಡಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>