ಬೆಂಗಳೂರಿನ ಕೆ.ಎಚ್.ಕಲಾಸೌಧವನ್ನು ದಶಕಗಳ ಕಾಲ ನಿರ್ವಹಿಸಿದ್ದ ‘ಪ್ರಕಸಂ’ ನಗೆ ನಾಟಕಗಳಿಗೆ ಜನಪ್ರಿಯ. ಪ್ರತಿ ವರ್ಷ ಹೊಸ ಕಲಾವಿದರೊಂದಿಗೆ ಒಂದು ನಾಟಕ ಪ್ರದರ್ಶಿಸುವ ವಾಡಿಕೆಯನ್ನು ಈ ತಂಡ ರೂಢಿಸಿಕೊಂಡು ಬಂದಿದೆ. ಅದರಂತೆ ಈ ವರ್ಷ ಮನುಷ್ಯ ಹಾಗೂ ಸಾಕು ಪ್ರಾಣಿಗಳ ನಡುವಿನ ಸಂಬಂಧ ವಿವರಿಸುವ ‘ವರಲಕ್ಷ್ಮಿ ಅವಾಂತರ’ ಎಂಬ ಹಾಸ್ಯ ನಾಟಕ ಪ್ರದರ್ಶಿಸುತ್ತದೆ.