ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಲೆನಾಡು ಎಜುಕೇಷನಲ್ ಟ್ರಸ್ಟ್ ವಿಷಯವಾಗಿ ಅಶೋಕ್ ಹಾರನಹಳ್ಳಿ ಅವರೂ ಸೇರಿದಂತೆ ಆರು ಮಂದಿ ಸದಸ್ಯರ ಮೇಲೆ ಪ್ರಕರಣ ದಾಖಲಿಸುವಂತೆಹಾಸನದ ಸಿವಿಲ್ ಕೋರ್ಟ್ ಆದೇಶಿಸಿದೆ. ಆದರೆ, ಮಹಾಸಭಾ ಚುನಾವಣೆಯ ಅಖಾಡಕ್ಕಿಳಿಯಲು ಅಶೋಕ್ ಅವರು ಏರ್ಪಡಿಸಿರುವ ಬೃಹತ್ ಸಭೆಯಲ್ಲಿಶಾಸಕ ರವಿಸುಬ್ರಹ್ಮಣ್ಯ ಅವರು ಉಪಸ್ಥಿತರಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ’ ಎಂದರು.