‘ಈಗಾಗಲೇ ಇಂತಹ ಅನೇಕ ಯೋಜನೆಗಳು ನಗರಕ್ಕೆ ಸಾಕಷ್ಟು ಹಾನಿ ಮಾಡಿದ್ದು, ಅವುಗಳ ಸಾಲಿಗೆ ಮತ್ತೊಂದನ್ನು ಸೇರ್ಪಡೆ ಮಾಡುವ ಅಗತ್ಯವಿಲ್ಲ. ನಗರದ ಯೋಜನೆಯನ್ನು ಮಹಾನಗರ ಯೋಜನಾ ಸಮಿತಿಯು ರೂಪಿಸಬೇಕು ಹಾಗೂ ಸಂಚಾರ ವ್ಯವಸ್ಥೆಯ ಯೋಜನೆ
ಗಳನ್ನು ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಪ್ರಾಧಿಕಾರವು ಗುರುತಿಸಿ, ಯೋಜನೆ ರೂಪಿಸಬೇಕು. ಬಿಬಿಎಂಪಿಯಲ್ಲಿ ಭ್ರಷ್ಟಾಚಾರ
ತಾಂಡವವಾಡುತ್ತಿದ್ದು, ಮೇಲ್ಸೇತುವೆ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡರೆ ಅದು ಮತ್ತೊಂದು ದುರಂತವಾಗಲಿದೆ’ ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.