ಆಸ್ಪತ್ರೆಯ ಬಹು ಅಂಗ ಕಸಿ ಸಲಹಾ ತಜ್ಞ ಡಾ. ಸುನಿಲ್ ಶೆನ್ವಿ ಮಾತನಾಡಿ, ‘ಜೀವಂತ ದಾನಿಯಿಂದ ಅಂಗಾಂಗ ಪಡೆದು, ಕಸಿ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸ. ಇದಕ್ಕೆ ಮೂರು ಹಂತಗಳಲ್ಲಿ ಚಿಕಿತ್ಸೆ ನಡೆಸಲಾಗುತ್ತದೆ. ದಾನಿಯಿಂದ ಅರ್ಧದಷ್ಟು ಪಿತ್ತಜನಕಾಂಗ ಹೊರತೆಗೆದು, ರೋಗಿಯಿಂದ ಹಾನಿಗೊಳಗಾದ ಪಿತ್ತಜನಕಾಂಗವನ್ನು ಹೊರತೆಗೆಯಬೇಕು. ನಂತರ ರೋಗಿಯ ದೇಹದಲ್ಲಿ ಹೊಸ ಅಂಗವನ್ನು ಜೋಡಿಸಬೇಕು. ರೋಗಿಗೆ ಕ್ಯಾನ್ಸರ್ ಇದ್ದುದರಿಂದ ಚಿಕಿತ್ಸೆ ಮತ್ತಷ್ಟು ಸವಾಲಿನಿಂದ ಕೂಡಿತ್ತು’ ಎಂದರು.