ಯುವಕನ ಅಂಗಾಂಗಗಳ ದಾನಕ್ಕೆ ಕುಟುಂಬದವರು ಸಮ್ಮತಿ ನೀಡಿದ ಬಳಿಕ, ರಾಜ್ಯ ಸರ್ಕಾರದ ಜೀವಸಾರ್ಥಕತೆ ಕಾರ್ಯಕ್ರಮದಡಿ ಹೆಸರು ನೋಂದಾಯಿಸಿಕೊಂಡವರಿಗೆ ಅಂಗಾಂಗಗಳನ್ನು ಒದಗಿಸಲಾಗಿದೆ.ಹೃದಯವನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಿ, ಹೃದಯ ಸಮಸ್ಯೆ ಇರುವವರಿಗೆ ಕಸಿ ಮಾಡಲಾಗಿದೆ. ಯಕೃತ್ತು ಮತ್ತು ಎರಡು ಮೂತ್ರಪಿಂಡಗಳನ್ನು ಸ್ಪರ್ಶ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಸಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.