<p><strong>ಬೆಂಗಳೂರು</strong>: ‘ರಾಜ್ಯದಲ್ಲಿ ಅನೇಕ ವೈದ್ಯರಿಗೆ ಕನ್ನಡ ಭಾಷೆ ಬರೆಯುವುದಿರಲಿ, ಸರಿಯಾಗಿ ಓದಲೂ ಬರುವುದಿಲ್ಲ. ಆದರೆ, ಡಾ. ನಾ. ಸೋಮೇಶ್ವರ ಅವರು ವೈದ್ಯಕೀಯ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ’ ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಶ್ಲಾಘಿಸಿದರು.</p><p>ಪಾಂಚಜನ್ಯ ಪ್ರತಿಷ್ಠಾನ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ.ಸೋಮೇಶ್ವರ ಅವರಿಗೆ ‘ಪಾಂಚಜನ್ಯ ಪ್ರಶಸ್ತಿ–2024’ ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿ ₹1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.</p><p>ಕನ್ನಡದ ವೈದ್ಯ ಸಾಹಿತ್ಯ ಕ್ಷೇತ್ರಕ್ಕೆ ಸೋಮೇಶ್ವರ ಅವರ ಕೊಡುಗೆ ಅಪಾರ. ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೂ ಕನ್ನಡ ಪುಸ್ತಕಗಳನ್ನೇ ಕೊಡುಗೆ ನೀಡಿ<br>ಮಾದರಿಯಾಗಿದ್ದಾರೆ’ ಎಂದರು.</p><p>‘ಇಂದು ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆ ಇದೆ. ಕಟ್ಟಡಗಳು ಸೋರುತ್ತವೆ. ಗೋಡೆಗಳು ಬೆಂಚ್, ಡೆಸ್ಕ್ಗಳ ಕೊರತೆ ಇದೆ. ‘ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕಿದೆ’ ಎಂದು ಹೇಳಿದರು.</p><p>ಲೇಖಕ ನಾ.ಸೋಮೇಶ್ವರ ಮಾತನಾಡಿ, ‘ಪ್ರಶಸ್ತಿ ಸ್ವೀಕಾರದಿಂದ ಕಾರ್ಯಭಾರ ಹೆಚ್ಚಾಗಿದೆ. ’ಥಟ್ ಅಂತ ಹೇಳಿ ಕಾರ್ಯಕ್ರಮ 4,750 ಕಂತುಗಳನ್ನು ಪೂರೈಸಿದೆ’<br>ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜ್ಯದಲ್ಲಿ ಅನೇಕ ವೈದ್ಯರಿಗೆ ಕನ್ನಡ ಭಾಷೆ ಬರೆಯುವುದಿರಲಿ, ಸರಿಯಾಗಿ ಓದಲೂ ಬರುವುದಿಲ್ಲ. ಆದರೆ, ಡಾ. ನಾ. ಸೋಮೇಶ್ವರ ಅವರು ವೈದ್ಯಕೀಯ ಕ್ಷೇತ್ರದ ಬಗ್ಗೆ ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ’ ಎಂದು ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಶ್ಲಾಘಿಸಿದರು.</p><p>ಪಾಂಚಜನ್ಯ ಪ್ರತಿಷ್ಠಾನ ಶನಿವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ನಾ.ಸೋಮೇಶ್ವರ ಅವರಿಗೆ ‘ಪಾಂಚಜನ್ಯ ಪ್ರಶಸ್ತಿ–2024’ ಪ್ರದಾನ ಮಾಡಿ ಮಾತನಾಡಿದರು. ಪ್ರಶಸ್ತಿ ₹1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.</p><p>ಕನ್ನಡದ ವೈದ್ಯ ಸಾಹಿತ್ಯ ಕ್ಷೇತ್ರಕ್ಕೆ ಸೋಮೇಶ್ವರ ಅವರ ಕೊಡುಗೆ ಅಪಾರ. ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೂ ಕನ್ನಡ ಪುಸ್ತಕಗಳನ್ನೇ ಕೊಡುಗೆ ನೀಡಿ<br>ಮಾದರಿಯಾಗಿದ್ದಾರೆ’ ಎಂದರು.</p><p>‘ಇಂದು ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆ ಇದೆ. ಕಟ್ಟಡಗಳು ಸೋರುತ್ತವೆ. ಗೋಡೆಗಳು ಬೆಂಚ್, ಡೆಸ್ಕ್ಗಳ ಕೊರತೆ ಇದೆ. ‘ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕಿದೆ’ ಎಂದು ಹೇಳಿದರು.</p><p>ಲೇಖಕ ನಾ.ಸೋಮೇಶ್ವರ ಮಾತನಾಡಿ, ‘ಪ್ರಶಸ್ತಿ ಸ್ವೀಕಾರದಿಂದ ಕಾರ್ಯಭಾರ ಹೆಚ್ಚಾಗಿದೆ. ’ಥಟ್ ಅಂತ ಹೇಳಿ ಕಾರ್ಯಕ್ರಮ 4,750 ಕಂತುಗಳನ್ನು ಪೂರೈಸಿದೆ’<br>ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>