‘ಯುವ ಪೀಳಿಗೆಗೆ ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಇಲ್ಲದ ಸ್ಥಿತಿ ಇದೆ. ಕಡ್ಡಾಯವಾಗಿ ಇವರನ್ನು ಓದುವಂತೆ ಮಾಡಿ, ಕೊನೆಯಲ್ಲಿ ಪದವಿಯ ಜತೆಗೆ ಪ್ರಮಾಣಪತ್ರ ನೀಡುವ ಪದ್ಧತಿಯನ್ನು ವಿಶ್ವವಿದ್ಯಾಲಯ ಜಾರಿಗೆ ತಂದಿದೆ. ವಿಶ್ವವಿದ್ಯಾಲಯದ ಮೌಲ್ಯವರ್ಧಿತ ಕಾರ್ಯಕ್ರಮ ಇದು’ ಎಂದು ಕುಲಾಧಿಪತಿ ಡಾ. ಎಂ. ಆರ್. ದೊರೆಸ್ವಾಮಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.