ಬೆಂಗಳೂರು ಅರಮನೆಯ ಮೂರು ಆಯಾಮಗಳ ಕಲಾಕೃತಿಯನ್ನು ಮುಖ್ಯ ಪ್ರಾಂಗಣದಲ್ಲಿ ಇರಿಸಲಾಗಿದೆ. ವಿಶೇಷ ದೀಪಾಲಂಕಾರವೂ ಈ ಕೃತಿಗೆ ಇದೆ. ಸ್ಥಳೀಯ ಕಲಾವಿದರ ನೆರವಿನೊಂದಿಗೆ ಸೃಷ್ಟಿ ಆರ್ಟ್ಸ್ನ ಸುಮಂಗಲಾ ಭಟ್ ಅವರು ಇಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವೂ ಹಲವು ಎನ್ಜಿಒ ಮತ್ತು ಕಾರ್ಪೊರೇಟ್ ಸಂಸ್ಥೆಗಳೂ ಈ ಕಾರ್ಯದಲ್ಲಿ ತೊಡಗಿವೆ. ಸಬ್ವೇಯನ್ನು ವರ್ಲಿ, ಚಿತ್ತಾರ ಕಲೆಗಳಿಂದ, ನಿಲ್ದಾಣದ ಗೋಡೆಗಳನ್ನು ಕಲಾಂಕಾರಿ ಕಲೆ, ತಂಜಾವೂರು ಶೈಲಿಯ ಕಲಾಕೃತಿಗಳಿಂದ ಅಲಂಕರಿಸಲಾಗಿದೆ.