‘ಪಂಪನ ವಂಶಸ್ಥರನ್ನು ಪತ್ತೆ ಹಚ್ಚಿದ್ದು, ನೇಪಾಳದಲ್ಲಿನ ಕೆಲವು ಆಚರಣೆಗಳಲ್ಲಿ ಕರ್ನಾಟಕದ ಸಂಸ್ಕೃತಿಯ ಪ್ರಭಾವವಿದೆ ಎನ್ನುವುದು ಹಾಗೂ ಕಾವೇರಿಯಿಂದ ಗೋದಾವರಿಯವರೆಗೆ ‘ಕರ್ಣಾಟಕ’ ಹಬ್ಬಿತ್ತು ಎನ್ನುವುದನ್ನು ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಲಾಗಿದ್ದು, ಅದು ನಿಜವೆಂದು ಸಾಬೀತು ಮಾಡಲು ಭಾಷಾ ಪುರಾವೆಗಳಿವೆ... ಹೀಗೆ ಹೊಸ ವಿಷಯಗಳನ್ನು ಪ್ರಪಂಚಕ್ಕೆ ಗೋಚರಿಸುವ ಕೆಲಸ ಮಾಡಿದ್ದೇನೆ ಎನ್ನುವ ಸಂತೃಪ್ತಿ ಇದೆ’ ಎಂದರು.