ರಾಷ್ಟ್ರಪತಿಗಳ 2016ನೇ ಸಾಲಿನ ವಿಶಿಷ್ಟ ಸೇವಾ ಪದಕಕ್ಕೆ ಎಡಿಜಿಪಿಗಳಾದ ಡಾ.ಎ.ಎಸ್.ಎನ್. ಮೂರ್ತಿ ಮತ್ತು ಡಾ. ಎಂ.ಎ. ಸಲೀಂ ಭಾಜರಾಗಿದ್ದರು. 2017ನೇ ಸಾಲಿನ ಪ್ರಶಸ್ತಿಗೆ ಎಡಿಜಿಪಿ ಕೆ.ಎಸ್.ಆರ್. ಚರಣ್ ರೆಡ್ಡಿ ಮತ್ತು ಮಾಲಿನಿ ಕೃಷ್ಣಮೂರ್ತಿ ಅರ್ಹರಾಗಿದ್ದರು. ಅಲ್ಲದೆ, 2016 ಹಾಗೂ 2017ರ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೊಡ ಮಾಡಲಾಗುವ ಪದಕಗಳಿಗೆ ಎಡಿಜಿಪಿಗಳು, ಐಜಿಪಿಗಳು, ಎಸ್ಪಿ, ಡಿವೈಎಸ್ಪಿ, ಕಮಾಂಡೆಂಟ್, ಇನ್ಸ್ಪೆಪೆಕ್ಟರ್, ಪಿಎಸ್ಐ, ಎಎಸ್ಐ, ಪೊಲೀಸ್ ಪೇದೆಗಳು ಸೇರಿ ಒಟ್ಟು 65 ಮಂದಿ ಪೊಲೀಸ್ ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಯಿತು.