<p><strong>ಬೆಂಗಳೂರು</strong>: ಪೂಜೆ ನೆಪದಲ್ಲಿ ಸೈಬರ್ ವಂಚಕನೊಬ್ಬ, ನಗರದ ಅರ್ಚಕರೊಬ್ಬರ ಖಾತೆಗೆ ಕನ್ನಹಾಕಿದ್ದಾನೆ. ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ವಂಚನೆ ಸಂಬಂಧ ಸ್ಥಳೀಯ ನಿವಾಸಿ ದಿನೇಶ್ ಭಟ್ ಎಂಬುವರು ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಜೂನ್ 27ರಂದು ದಿನೇಶ್ ಅವರಿಗೆ ಕರೆ ಮಾಡಿದ್ದ ಅಪರಿಚಿತ, ತಮ್ಮ ಮನೆಯಲ್ಲಿ ಪೂಜೆ ಇರುವುದಾಗಿ ಹೇಳಿದ್ದ. ಪೂಜೆ ನೆರವೇರಿಸಿದರೆ ₹5 ಸಾವಿರ ಪಾವತಿಸುವುದಾಗಿಯೂ ತಿಳಿಸಿದ್ದ. ಅದಕ್ಕೆ ದಿನೇಶ್ ಒಪ್ಪಿದ್ದರು.’</p>.<p>‘ಮುಂಗಡವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದ ಆರೋಪಿ, ಹಣ ವರ್ಗಾವಣೆ ಸೋಗಿನಲ್ಲಿ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ದಿನೇಶ್ ಅವರು ಸ್ಕ್ಯಾನ್ ಮಾಡಿದ್ದರು. ಕ್ಷಣಮಾತ್ರದಲ್ಲೇ ಬ್ಯಾಂಕ್ ಖಾತೆಯಿಂದ ₹20 ಸಾವಿರ ಕಡಿತವಾಗಿದೆ. ನಂತರ, ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೂಜೆ ನೆಪದಲ್ಲಿ ಸೈಬರ್ ವಂಚಕನೊಬ್ಬ, ನಗರದ ಅರ್ಚಕರೊಬ್ಬರ ಖಾತೆಗೆ ಕನ್ನಹಾಕಿದ್ದಾನೆ. ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ವಂಚನೆ ಸಂಬಂಧ ಸ್ಥಳೀಯ ನಿವಾಸಿ ದಿನೇಶ್ ಭಟ್ ಎಂಬುವರು ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಜೂನ್ 27ರಂದು ದಿನೇಶ್ ಅವರಿಗೆ ಕರೆ ಮಾಡಿದ್ದ ಅಪರಿಚಿತ, ತಮ್ಮ ಮನೆಯಲ್ಲಿ ಪೂಜೆ ಇರುವುದಾಗಿ ಹೇಳಿದ್ದ. ಪೂಜೆ ನೆರವೇರಿಸಿದರೆ ₹5 ಸಾವಿರ ಪಾವತಿಸುವುದಾಗಿಯೂ ತಿಳಿಸಿದ್ದ. ಅದಕ್ಕೆ ದಿನೇಶ್ ಒಪ್ಪಿದ್ದರು.’</p>.<p>‘ಮುಂಗಡವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದ ಆರೋಪಿ, ಹಣ ವರ್ಗಾವಣೆ ಸೋಗಿನಲ್ಲಿ ಕ್ಯೂಆರ್ ಕೋಡ್ ಕಳುಹಿಸಿದ್ದ. ಅದನ್ನು ದಿನೇಶ್ ಅವರು ಸ್ಕ್ಯಾನ್ ಮಾಡಿದ್ದರು. ಕ್ಷಣಮಾತ್ರದಲ್ಲೇ ಬ್ಯಾಂಕ್ ಖಾತೆಯಿಂದ ₹20 ಸಾವಿರ ಕಡಿತವಾಗಿದೆ. ನಂತರ, ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>