<p><strong>ಬೆಂಗಳೂರು:</strong> ಪಾಡ್ ಟ್ಯಾಕ್ಸಿ ಸೇವೆಯಿಂದ ನಗರಕ್ಕೆ ಅನುಕೂಲವಾಗುವುದಾದರೆ ಮಾತ್ರ ಈ ಯೋಜನೆಯನ್ನು ಆರಂಭಿಸುತ್ತೇವೆ ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದ್ದಾರೆ.</p>.<p>‘ಕೆಲವು ನಗರಯೋಜನಾ ತಜ್ಞರಿಂದ ವಿರೋಧ ವ್ಯಕ್ತವಾಗಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನೇ ರದ್ದುಪಡಿಸುವುದಾಗಿ ನಾನು ಹೇಳಿಲ್ಲ. ನಮ್ಮ ಪಕ್ಷದವರು ಆರಂಭಿಸಿದ್ದಾರೆ ಎಂಬ ಮಾತ್ರಕ್ಕೆ ಇದಕ್ಕೆ ಅನುಮತಿ ನೀಡಲಾಗದು. ಈ ಬಗ್ಗೆ ಒಮ್ಮತದ ತೀರ್ಮಾನ<br />ವಾಗಲಿ’ ಎಂದು ಮೇಯರ್ ಹೇಳಿದರು.</p>.<p>‘ಈ ಯೋಜನೆಗೆ ಪಾಲಿಕೆ ಹಣ ಹೂಡಿಕೆ ಮಾಡಬೇಕಾಗಿಲ್ಲ. ಯೋಜನೆ ಕುರಿತ ವಿವರಗಳನ್ನು ಒದಗಿಸುವಂತೆ ವಿರೋಧ ಪಕ್ಷದವರು ಒತ್ತಾಯಿಸಿದ್ದಾರೆ. ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ನಾನು ಬದ್ಧ’ ಎಂದರು.</p>.<p>‘ರಾಜಕೀಯ ಕಾರಣಕ್ಕೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಆಗುವ ಹಾನಿಯಾದರೂ ಏನು ಎಂಬುದನ್ನು ಅವರು ಸಾಬೀತುಪಡಿಸಲಿ’ ಎಂದು ಸವಾಲು ಎಸೆದರು.</p>.<p><strong>ಹೆಲಿಪ್ಯಾಡ್ಗೆ ಬಿಬಿಎಂಪಿ ಜಾಗ</strong></p>.<p>ಕಲ್ಲು ಕ್ವಾರಿಗಳಿಗೆ ಕಸ ತುಂಬಿ ಭೂಭರ್ತಿ ಮಾಡಿರುವ ಜಾಗಗಳ ಪೈಕಿ ಕೆಲವನ್ನು ಹೆಲಿಪ್ಯಾಡ್ ನಿರ್ಮಾಣಕ್ಕೆ ಬಾಡಿಗೆಗೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.</p>.<p>ದಾಸರಹಳ್ಳಿ ವಲಯದ ಮಲ್ಲಸಂದ್ರ, ಬೊಮ್ಮನಹಳ್ಳಿಯ ಬಿಂಗೀಪುರ, ದಕ್ಷಿಣ ವಲಯದ ಅಂಜನಾಪುರ, ಯಲಹಂಕ ವಲಯದ ಬೆಲ್ಲಹಳ್ಳಿ ಹಾಗೂ ಬಾಗಲೂರುಗಳಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದೆ. ಮಹದೇವಪುರ ವಲಯದಲ್ಲಿ ಜಾಗಕ್ಕಾಗಿ ಹುಡುಕಾಟ ನಡೆದಿದೆ.</p>.<p>ಹೆಲಿಪ್ಯಾಡ್ ನಿರ್ಮಿಸುವವರಿಗೆ ನಾವು ನಗರದ ಹೊರವಲಯದಲ್ಲಿರುವ ಜಾಗವನ್ನು ಬಾಡಿಗೆಗೆ ನೀಡುತ್ತೇವೆ. ತ್ಯಾಜ್ಯವನ್ನು ಭರ್ತಿ ಮಾಡಿರುವ ಈ ಜಾಗಗಳು ವ್ಯರ್ಥವಾಗುವ ಬದಲು ಈ ನಿಟ್ಟಿನಲ್ಲಾದರೂ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಮೇಯರ್ ಸಂಪತ್ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>24 ಗಂಟೆ ಗಡುವು</strong></p>.<p>ಪೌರಕಾರ್ಮಿಕರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿರುವ ವೇತನವನ್ನು 24 ಗಂಟೆಗಳ ಒಳಗೆ ಪಾವತಿಸಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.</p>.<p>ಪೌರ ಕಾರ್ಮಿಕರ ವೇತನ ಪಾವತಿ ಬಗ್ಗೆ ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು.</p>.<p>ಮೂರು ವಲಯಗಳಲ್ಲಿ ಒಂದು ವರ್ಷದಿಂದ ಕೆಲವರಿಗೆ ಒಂದು ವರ್ಷದಿಂದ ವೇತನ ಪಾವತಿ ಆಗಿಲ್ಲ. ಇಂತಹ ಧೋರಣೆ ಸಹಿಸಲಾಗದು. ತಕ್ಷಣವೇ ಬಾಕಿ ಪಾವತಿಸುವಂತೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪಾಡ್ ಟ್ಯಾಕ್ಸಿ ಸೇವೆಯಿಂದ ನಗರಕ್ಕೆ ಅನುಕೂಲವಾಗುವುದಾದರೆ ಮಾತ್ರ ಈ ಯೋಜನೆಯನ್ನು ಆರಂಭಿಸುತ್ತೇವೆ ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದ್ದಾರೆ.</p>.<p>‘ಕೆಲವು ನಗರಯೋಜನಾ ತಜ್ಞರಿಂದ ವಿರೋಧ ವ್ಯಕ್ತವಾಗಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನೇ ರದ್ದುಪಡಿಸುವುದಾಗಿ ನಾನು ಹೇಳಿಲ್ಲ. ನಮ್ಮ ಪಕ್ಷದವರು ಆರಂಭಿಸಿದ್ದಾರೆ ಎಂಬ ಮಾತ್ರಕ್ಕೆ ಇದಕ್ಕೆ ಅನುಮತಿ ನೀಡಲಾಗದು. ಈ ಬಗ್ಗೆ ಒಮ್ಮತದ ತೀರ್ಮಾನ<br />ವಾಗಲಿ’ ಎಂದು ಮೇಯರ್ ಹೇಳಿದರು.</p>.<p>‘ಈ ಯೋಜನೆಗೆ ಪಾಲಿಕೆ ಹಣ ಹೂಡಿಕೆ ಮಾಡಬೇಕಾಗಿಲ್ಲ. ಯೋಜನೆ ಕುರಿತ ವಿವರಗಳನ್ನು ಒದಗಿಸುವಂತೆ ವಿರೋಧ ಪಕ್ಷದವರು ಒತ್ತಾಯಿಸಿದ್ದಾರೆ. ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ನಾನು ಬದ್ಧ’ ಎಂದರು.</p>.<p>‘ರಾಜಕೀಯ ಕಾರಣಕ್ಕೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಆಗುವ ಹಾನಿಯಾದರೂ ಏನು ಎಂಬುದನ್ನು ಅವರು ಸಾಬೀತುಪಡಿಸಲಿ’ ಎಂದು ಸವಾಲು ಎಸೆದರು.</p>.<p><strong>ಹೆಲಿಪ್ಯಾಡ್ಗೆ ಬಿಬಿಎಂಪಿ ಜಾಗ</strong></p>.<p>ಕಲ್ಲು ಕ್ವಾರಿಗಳಿಗೆ ಕಸ ತುಂಬಿ ಭೂಭರ್ತಿ ಮಾಡಿರುವ ಜಾಗಗಳ ಪೈಕಿ ಕೆಲವನ್ನು ಹೆಲಿಪ್ಯಾಡ್ ನಿರ್ಮಾಣಕ್ಕೆ ಬಾಡಿಗೆಗೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.</p>.<p>ದಾಸರಹಳ್ಳಿ ವಲಯದ ಮಲ್ಲಸಂದ್ರ, ಬೊಮ್ಮನಹಳ್ಳಿಯ ಬಿಂಗೀಪುರ, ದಕ್ಷಿಣ ವಲಯದ ಅಂಜನಾಪುರ, ಯಲಹಂಕ ವಲಯದ ಬೆಲ್ಲಹಳ್ಳಿ ಹಾಗೂ ಬಾಗಲೂರುಗಳಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದೆ. ಮಹದೇವಪುರ ವಲಯದಲ್ಲಿ ಜಾಗಕ್ಕಾಗಿ ಹುಡುಕಾಟ ನಡೆದಿದೆ.</p>.<p>ಹೆಲಿಪ್ಯಾಡ್ ನಿರ್ಮಿಸುವವರಿಗೆ ನಾವು ನಗರದ ಹೊರವಲಯದಲ್ಲಿರುವ ಜಾಗವನ್ನು ಬಾಡಿಗೆಗೆ ನೀಡುತ್ತೇವೆ. ತ್ಯಾಜ್ಯವನ್ನು ಭರ್ತಿ ಮಾಡಿರುವ ಈ ಜಾಗಗಳು ವ್ಯರ್ಥವಾಗುವ ಬದಲು ಈ ನಿಟ್ಟಿನಲ್ಲಾದರೂ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಮೇಯರ್ ಸಂಪತ್ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>24 ಗಂಟೆ ಗಡುವು</strong></p>.<p>ಪೌರಕಾರ್ಮಿಕರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿರುವ ವೇತನವನ್ನು 24 ಗಂಟೆಗಳ ಒಳಗೆ ಪಾವತಿಸಬೇಕು ಎಂದು ಮೇಯರ್ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.</p>.<p>ಪೌರ ಕಾರ್ಮಿಕರ ವೇತನ ಪಾವತಿ ಬಗ್ಗೆ ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು.</p>.<p>ಮೂರು ವಲಯಗಳಲ್ಲಿ ಒಂದು ವರ್ಷದಿಂದ ಕೆಲವರಿಗೆ ಒಂದು ವರ್ಷದಿಂದ ವೇತನ ಪಾವತಿ ಆಗಿಲ್ಲ. ಇಂತಹ ಧೋರಣೆ ಸಹಿಸಲಾಗದು. ತಕ್ಷಣವೇ ಬಾಕಿ ಪಾವತಿಸುವಂತೆ ಸೂಚನೆ ನೀಡಿದ್ದೇನೆ ಎಂದು ಮೇಯರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>