‘ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಂಚೆ ಇಲಾಖೆ, ಮಿಜೋರಾಂನ ಗುಡ್ಡಗಾಡು ಪ್ರದೇಶದಲ್ಲೂ ಎಟಿಎಂ ಕೇಂದ್ರ ಆರಂಭಿಸಿದೆ. 1 ಸಾವಿರ ಎಟಿಎಂ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಲಾಕ್ಡೌನ್ ವೇಳೆ ಇಲಾಖೆಯ ಎಟಿಎಂಗಳ ಮೂಲಕ ಸುಮಾರು ₹404 ಕೋಟಿ ವಹಿವಾಟು ನಡೆದಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಶೇ 85 ರಷ್ಟು ಖಾತೆಗಳನ್ನು ಇಲಾಖೆ ನಿರ್ವಹಿಸುತ್ತಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್ ಸದಸ್ಯೆ ಸಂಧ್ಯಾರಾಣಿ ತಿಳಿಸಿದರು.