<p><strong>ಬೆಂಗಳೂರು: </strong>ದೇಶದಲ್ಲಿ ಒಂದು ಸಾವಿರ ಅಂಚೆ ಎಟಿಎಂ ಕೇಂದ್ರಗಳ ಸ್ಥಾಪನೆಯ ನೆನಪಾರ್ಥ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಬುಧವಾರ ಬಿಡುಗಡೆ ಮಾಡಿತು.</p>.<p>ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ವಿಡಿಯೊ ಸಂವಾದದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಿಜೋರಾಂನ ಲಂಗ್ಲೇರಿಯಲ್ಲಿ ತೆರೆಯಲಾಗಿರುವ ನೂತನ ಅಂಚೆ ಎಟಿಎಂ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಲಂಗ್ಲೇರಿ ಅಂಚೆ ಎಟಿಎಂ ಕೇಂದ್ರ 1,000ನೇ ಪಟ್ಟಿಗೆ ಸೇರ್ಪಡೆಯಾಯಿತು.</p>.<p>‘ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಂಚೆ ಇಲಾಖೆ, ಮಿಜೋರಾಂನ ಗುಡ್ಡಗಾಡು ಪ್ರದೇಶದಲ್ಲೂ ಎಟಿಎಂ ಕೇಂದ್ರ ಆರಂಭಿಸಿದೆ. 1 ಸಾವಿರ ಎಟಿಎಂ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಲಾಕ್ಡೌನ್ ವೇಳೆ ಇಲಾಖೆಯ ಎಟಿಎಂಗಳ ಮೂಲಕ ಸುಮಾರು ₹404 ಕೋಟಿ ವಹಿವಾಟು ನಡೆದಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಶೇ 85 ರಷ್ಟು ಖಾತೆಗಳನ್ನು ಇಲಾಖೆ ನಿರ್ವಹಿಸುತ್ತಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್ ಸದಸ್ಯೆ ಸಂಧ್ಯಾರಾಣಿ ತಿಳಿಸಿದರು.</p>.<p class="Subhead"><strong>ಚೆನ್ನೈನಲ್ಲಿ ಮೊದಲ ಎಟಿಎಂ:</strong> ‘ಭಾರತೀಯ ಅಂಚೆ ಇಲಾಖೆಯು ಮಾಹಿತಿ ತಂತ್ರಜ್ಞಾನ ಆಧುನೀಕರಣ ಯೋಜನೆಯಡಿ 2014ರಲ್ಲಿ ಮೊದಲ ಅಂಚೆ ಎಟಿಎಂ ಕೇಂದ್ರವನ್ನು ಚೆನ್ನೈನಲ್ಲಿ ತೆರೆಯಿತು. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಿಂದ ಈ ಎಲ್ಲ ಎಟಿಎಂ ಕೇಂದ್ರಗಳ ನಿರ್ವಹಣೆ ಮಾಡಲಾಗುವುದು. ಇಲ್ಲಿರುವ ಉತ್ತಮ ತಾಂತ್ರಿಕ ನಿರ್ವಹಣೆಯ ತಂಡದ ನೆರವಿನಿಂದ ಗುಡ್ಡಗಾಡು ಪ್ರದೇಶಗಳಲ್ಲಿರುವ ಎಟಿಎಂಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಅಂಚೆ ಇಲಾಖೆ ಎಂಟಿಎಂ ನಿರ್ವಹಣೆ ಕೇಂದ್ರದ ಹಿರಿಯ ಅಧಿಕಾರಿ ರಾಜೇಂದ್ರ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದೇಶದಲ್ಲಿ ಒಂದು ಸಾವಿರ ಅಂಚೆ ಎಟಿಎಂ ಕೇಂದ್ರಗಳ ಸ್ಥಾಪನೆಯ ನೆನಪಾರ್ಥ ವಿಶೇಷ ಅಂಚೆ ಲಕೋಟೆಯನ್ನು ಅಂಚೆ ಇಲಾಖೆ ಬುಧವಾರ ಬಿಡುಗಡೆ ಮಾಡಿತು.</p>.<p>ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ವಿಡಿಯೊ ಸಂವಾದದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಿಜೋರಾಂನ ಲಂಗ್ಲೇರಿಯಲ್ಲಿ ತೆರೆಯಲಾಗಿರುವ ನೂತನ ಅಂಚೆ ಎಟಿಎಂ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಲಂಗ್ಲೇರಿ ಅಂಚೆ ಎಟಿಎಂ ಕೇಂದ್ರ 1,000ನೇ ಪಟ್ಟಿಗೆ ಸೇರ್ಪಡೆಯಾಯಿತು.</p>.<p>‘ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಂಚೆ ಇಲಾಖೆ, ಮಿಜೋರಾಂನ ಗುಡ್ಡಗಾಡು ಪ್ರದೇಶದಲ್ಲೂ ಎಟಿಎಂ ಕೇಂದ್ರ ಆರಂಭಿಸಿದೆ. 1 ಸಾವಿರ ಎಟಿಎಂ ಕೇಂದ್ರಗಳನ್ನು ತೆರೆಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಲಾಕ್ಡೌನ್ ವೇಳೆ ಇಲಾಖೆಯ ಎಟಿಎಂಗಳ ಮೂಲಕ ಸುಮಾರು ₹404 ಕೋಟಿ ವಹಿವಾಟು ನಡೆದಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಶೇ 85 ರಷ್ಟು ಖಾತೆಗಳನ್ನು ಇಲಾಖೆ ನಿರ್ವಹಿಸುತ್ತಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್ ಸದಸ್ಯೆ ಸಂಧ್ಯಾರಾಣಿ ತಿಳಿಸಿದರು.</p>.<p class="Subhead"><strong>ಚೆನ್ನೈನಲ್ಲಿ ಮೊದಲ ಎಟಿಎಂ:</strong> ‘ಭಾರತೀಯ ಅಂಚೆ ಇಲಾಖೆಯು ಮಾಹಿತಿ ತಂತ್ರಜ್ಞಾನ ಆಧುನೀಕರಣ ಯೋಜನೆಯಡಿ 2014ರಲ್ಲಿ ಮೊದಲ ಅಂಚೆ ಎಟಿಎಂ ಕೇಂದ್ರವನ್ನು ಚೆನ್ನೈನಲ್ಲಿ ತೆರೆಯಿತು. ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಿಂದ ಈ ಎಲ್ಲ ಎಟಿಎಂ ಕೇಂದ್ರಗಳ ನಿರ್ವಹಣೆ ಮಾಡಲಾಗುವುದು. ಇಲ್ಲಿರುವ ಉತ್ತಮ ತಾಂತ್ರಿಕ ನಿರ್ವಹಣೆಯ ತಂಡದ ನೆರವಿನಿಂದ ಗುಡ್ಡಗಾಡು ಪ್ರದೇಶಗಳಲ್ಲಿರುವ ಎಟಿಎಂಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಅಂಚೆ ಇಲಾಖೆ ಎಂಟಿಎಂ ನಿರ್ವಹಣೆ ಕೇಂದ್ರದ ಹಿರಿಯ ಅಧಿಕಾರಿ ರಾಜೇಂದ್ರ ಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>