ಬೆಂಗಳೂರು:ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 19ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವ್ಯತ್ಯಯ ಆಗಲಿರುವ ಸ್ಥಳಗಳು: ಸೂರ್ಯಸಿಟಿ ಎರಡನೇ ಹಂತ, ಹಿಣಕ್ಕಿರಾಜಾಪುರ, ರಾಮಕೃಷ್ಣಾಪುರ, ರಿಚ್ಮಂಡ್, ಜೆ.ಆರ್.ಗ್ರೀನ್ ಪಾರ್ಕ್, ಆನೇಕಲ್ ಮುಖ್ಯರಸ್ತೆ, ಮರಸೂರು, ನಾಗಯನಹಳ್ಳಿ, ಸೂರ್ಯನಗರ ಮೊದಲನೇ ಹಂತ ಹಾಗೂ ಸುತ್ತಲಿನ ಪ್ರದೇಶ.