‘ಈ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗೆ ಶಾಸಕರು ಮತಪತ್ರವನ್ನು ತೋರಿಸುವಂತಿಲ್ಲ. ಚುನಾವಣಾ ಆಯೋಗ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸುವುದಾಗಿ ಈಗಾಗಲೇ ಹಲವು ಬಾರಿ ತಿಳಿಸಿದೆ. ದ್ರೌಪದಿ ಮುರ್ಮು ಗೆಲ್ಲುವುದರಲ್ಲಿ ಸಂಶಯವೂ ಇಲ್ಲ. ಎನ್ಡಿಎಯೇತರ ಪಕ್ಷಗಳೂ ಅವರನ್ನು ಬೆಂಬಲಿಸಿದೆ. ಆದ್ದರಿಂದ ಅತಿವೃಷ್ಟಿ ಈ ಸಂದರ್ಭದಲ್ಲಿ ಮೂರು ದಿನ ಬೆಂಗಳೂರಿನಲ್ಲೇ ಉಳಿಯಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ’ ಅವರು ಹೇಳಿದರು.