<p><strong>ಬೆಂಗಳೂರು</strong>: ಪ್ರಸಾದನ ಕಂಪನಿಯೊಂದರ ಹೆಸರಿನಲ್ಲಿ ಬಹುಮಾನದ ಆಮಿಷವೊಡ್ಡಿ ನಗರದ ವಿನುಶ್ರೀ ಎಂಬುವರಿಂದ ₹77 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ವಂಚನೆಗೀಡಾಗಿರುವ ಹೊಸಪಾಳ್ಯದ ವಿನುಶ್ರೀ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ನಾಯ್ಕ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಜುಲೈ 21ರಂದು ವಿನುಶ್ರೀ ಅವರಿಗೆ ಕರೆ ಮಾಡಿದ್ದ ಆರೋಪಿ ರಾಕೇಶ್, ‘ನಾನು ಪ್ರಸಾದನ ಕಂಪನಿಯೊಂದರ ನೌಕರ. ಗ್ರಾಹಕರಿಗೆ ಪ್ರತಿ ವರ್ಷ ಬಹುಮಾನ ನೀಡಲಾಗುತ್ತಿದ್ದು, ಈ ವರ್ಷ ನಿಮಗೆ ಬಹುಮಾನ ಬಂದಿದೆ’ ಎಂದಿದ್ದ. ಪಾರ್ಸೆಲ್ ಮೂಲಕ ಮನೆಗೆ ಬಹುಮಾನ ಕಳುಹಿಸುವುದಾಗಿ ತಿಳಿಸಿದ್ದ.’</p>.<p>‘ಆಗಸ್ಟ್ 1ರಂದು ವಿನುಶ್ರೀ ಮನೆಗೆ ಕೋರಿಯರ್ ಕಳುಹಿಸಿದ್ದ ಆರೋಪಿ, ಅದರಲ್ಲಿ ಪತ್ರವನ್ನು ಮಾತ್ರ ಇಟ್ಟಿದ್ದ. ಆ ಬಗ್ಗೆ ಕೇಳಲೆಂದು ವಿನುಶ್ರೀ ಪುನಃ ರಾಕೇಶ್ಗೆ ಕರೆ ಮಾಡಿದ್ದರು. ‘ಕಂಪನಿಯ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು’ ಎಂದಿದ್ದ ಅರೋಪಿ ಹೇಳಿದ್ದ. ಅದನ್ನು ನಂಬಿದ್ದ ವಿನುಶ್ರೀ, ಆರೋಪಿ ಹೇಳಿದ್ದ ಖಾತೆಗೆ ₹77 ಸಾವಿರ ಜಮೆ ಮಾಡಿದ್ದರು. ನಂತರ, ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರಸಾದನ ಕಂಪನಿಯೊಂದರ ಹೆಸರಿನಲ್ಲಿ ಬಹುಮಾನದ ಆಮಿಷವೊಡ್ಡಿ ನಗರದ ವಿನುಶ್ರೀ ಎಂಬುವರಿಂದ ₹77 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ವಂಚನೆಗೀಡಾಗಿರುವ ಹೊಸಪಾಳ್ಯದ ವಿನುಶ್ರೀ ದೂರು ನೀಡಿದ್ದಾರೆ. ಆರೋಪಿ ರಾಕೇಶ್ ನಾಯ್ಕ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<p>‘ಜುಲೈ 21ರಂದು ವಿನುಶ್ರೀ ಅವರಿಗೆ ಕರೆ ಮಾಡಿದ್ದ ಆರೋಪಿ ರಾಕೇಶ್, ‘ನಾನು ಪ್ರಸಾದನ ಕಂಪನಿಯೊಂದರ ನೌಕರ. ಗ್ರಾಹಕರಿಗೆ ಪ್ರತಿ ವರ್ಷ ಬಹುಮಾನ ನೀಡಲಾಗುತ್ತಿದ್ದು, ಈ ವರ್ಷ ನಿಮಗೆ ಬಹುಮಾನ ಬಂದಿದೆ’ ಎಂದಿದ್ದ. ಪಾರ್ಸೆಲ್ ಮೂಲಕ ಮನೆಗೆ ಬಹುಮಾನ ಕಳುಹಿಸುವುದಾಗಿ ತಿಳಿಸಿದ್ದ.’</p>.<p>‘ಆಗಸ್ಟ್ 1ರಂದು ವಿನುಶ್ರೀ ಮನೆಗೆ ಕೋರಿಯರ್ ಕಳುಹಿಸಿದ್ದ ಆರೋಪಿ, ಅದರಲ್ಲಿ ಪತ್ರವನ್ನು ಮಾತ್ರ ಇಟ್ಟಿದ್ದ. ಆ ಬಗ್ಗೆ ಕೇಳಲೆಂದು ವಿನುಶ್ರೀ ಪುನಃ ರಾಕೇಶ್ಗೆ ಕರೆ ಮಾಡಿದ್ದರು. ‘ಕಂಪನಿಯ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು’ ಎಂದಿದ್ದ ಅರೋಪಿ ಹೇಳಿದ್ದ. ಅದನ್ನು ನಂಬಿದ್ದ ವಿನುಶ್ರೀ, ಆರೋಪಿ ಹೇಳಿದ್ದ ಖಾತೆಗೆ ₹77 ಸಾವಿರ ಜಮೆ ಮಾಡಿದ್ದರು. ನಂತರ, ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>