‘ಆಗಸ್ಟ್ 1ರಂದು ವಿನುಶ್ರೀ ಮನೆಗೆ ಕೋರಿಯರ್ ಕಳುಹಿಸಿದ್ದ ಆರೋಪಿ, ಅದರಲ್ಲಿ ಪತ್ರವನ್ನು ಮಾತ್ರ ಇಟ್ಟಿದ್ದ. ಆ ಬಗ್ಗೆ ಕೇಳಲೆಂದು ವಿನುಶ್ರೀ ಪುನಃ ರಾಕೇಶ್ಗೆ ಕರೆ ಮಾಡಿದ್ದರು. ‘ಕಂಪನಿಯ ಬಹುಮಾನ ಪಡೆದುಕೊಳ್ಳಲು ಶುಲ್ಕ ಪಾವತಿಸಬೇಕು’ ಎಂದಿದ್ದ ಅರೋಪಿ ಹೇಳಿದ್ದ. ಅದನ್ನು ನಂಬಿದ್ದ ವಿನುಶ್ರೀ, ಆರೋಪಿ ಹೇಳಿದ್ದ ಖಾತೆಗೆ ₹77 ಸಾವಿರ ಜಮೆ ಮಾಡಿದ್ದರು. ನಂತರ, ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.