ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕವಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಎಂಜಿನಿಯರ್ಗಳಿಗೆ ಬಡ್ತಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟದ ಅಧ್ಯಕ್ಷ ಎಚ್.ಇಂದ್ರಯ್ಯ ಆರೋಪಿಸಿದರು.
ಬಡ್ತಿಗೆ 10 ವರ್ಷಗಳಿಂದ ಅರ್ಹರಿದ್ದರೂತಾಂತ್ರಿಕ ಸಮಸ್ಯೆಗಳನ್ನುತಂದೊಡ್ಡಿ ಅನ್ಯಾಯ ಮಾಡಲಾಗುತ್ತಿದೆ. ಇದಕ್ಕೆ ಕಾರಣವಾಗಿರುವ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
2003–04ರಲ್ಲಿ ಬ್ಯಾಕ್ಲಾಗ್ ಹುದ್ದೆಗಳಿಗೆ 118 ಸಹಾಯಕ ಎಂಜಿನಿಯರ್ಗಳ ನೇಮಕವಾಯಿತು. ಅವರು ನಾಲ್ಕು ವರ್ಷಗಳಿಂದ ಅರ್ಹರಿದ್ದರೂ ಬಡ್ತಿ ನೀಡಿಲ್ಲ. ಈ ಸಂಬಂಧ ಎಂಜಿನಿಯರ್ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪ್ರಮಾಣ ಪತ್ರವನ್ನು ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದೆ. ಬಡ್ತಿ ಮೀಸಲಾತಿಯಪವಿತ್ರ ಪ್ರಕರಣಕ್ಕೂ ಈ ಎಂಜಿನಿಯರ್ಗಳಿಗೂ ಸಂಬಂಧ ಇಲ್ಲದಿದ್ದರೂ ಜ್ಯೇಷ್ಠತಾ ಸಂಖ್ಯೆ ನೀಡದೆ ತಾಂತ್ರಿಕ ಸಮಸ್ಯೆಗಳನ್ನು ಸೃಷ್ಟಿಸಲಾಗಿದೆ ಎಂದು ದೂರಿದರು.
‘ಜುಲೈ 8ಎಂದು ಎಚ್.ಡಿ. ರೇವಣ್ಣ ಅವರು ಡಿಪಿಸಿ (ಇಲಾಖಾ ಪದೋನ್ನತಿ ಸಮಿತಿ) ಸಭೆ ನಡೆಸಿದ್ದು, ಅಲ್ಲಿಯೂ ಈ ಎಂಜಿನಿಯರ್ಗಳನ್ನು ಪರಿಗಣಿಸದೆ ತಮಗೆ ಬೇಕಾದವರಿಗೆ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರಿಗೂ ಬಡ್ತಿ ನೀಡಲು ನಿರ್ಧರಿಸಿದ್ದಾರೆ’ ಎಂದು ಆರೋಪಿಸಿದರು.