‘ದೇವಸ್ಥಾನದ ಕೊನೆಯಲ್ಲಿ ನಾವು ವಾಹನ ನಿಲ್ಲಿಸಿಕೊಂಡಿದ್ದೆವು. ಆ ರಸ್ತೆ ಅಲ್ಲಿಗೆ ಪೂರ್ಣಗೊಳ್ಳುತ್ತದೆ. ಹೀಗಾಗಿ ಭಾರಿ ದಟ್ಟಣೆಯಾಗುವಷ್ಟು ವಾಹನಗಳು ಅಲ್ಲಿ ಓಡಾಡುವುದಿಲ್ಲ. ಹೇಗೆಂದರೆ ಹಾಗೆ ನಾವು ವಾಹನವನ್ನು ನಿಲ್ಲಿಸುವುದಿಲ್ಲ. ಮುಖ್ಯ ರಸ್ತೆಯಲ್ಲಿ ಹಾಗೆ ನಿಲ್ಲಿಸಿದ್ದರೆ, ಅವರು ಹೇಳುವುದು ಸರಿ. ಒಳ ರಸ್ತೆಗಳಲ್ಲಿ ನಿಲ್ಲಿಸಿದಕ್ಕೆ ಅವರುಮನಸ್ಸಿಗೆ ಬಂದಂತೆ ವರ್ತಿಸಿದರೆ, ನಾವೇನು ಮಾಡುವುದು. ಪೊಲೀಸರು ದರ್ಪ ತೋರುತ್ತಾರೆ ಎನ್ನುವ ಭಾವನೆ ಜನರಲ್ಲಿದೆ. ಬೈಯುತ್ತಾರೆ ಏನು ಮಾಡುವುದು. ಜನರಿಗೆ ತೊಂದರೆಯಾಗಬಾರದು ಎಂದೇ ನಾವುಅಲ್ಲಿ ಕೆಲಸ ಮಾಡುತ್ತಿರುತ್ತೇವೆ’ ಎಂದು ಹೇಳಿದರು.