ಬೆಂಗಳೂರು: ಆಧಾರ್ ಗುರುತಿನ ಚೀಟಿ ತಿದ್ದುಪಡಿಗಾಗಿ, ಕಳೆದುಹೋದ ಯುಐಡಿ ಪತ್ತೆ ಹಚ್ಚಲು, ವಿಳಾಸ ಬದಲಾವಣೆ ಮತ್ತಿತರ ಉದ್ದೇಶಕ್ಕೆ ನಗರದ ಬೆಂಗಳೂರು ಒನ್ ಕೇಂದ್ರಗಳ ಎದುರು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಈ ಕೇಂದ್ರಗಳು ತೆರೆಯುವ ಒಂದು ತಾಸು ಮೊದಲೇ ಟೋಕನ್ಗಾಗಿ ಸರತಿಯಲ್ಲಿ ಜನರು ನಿಲ್ಲುತ್ತಿದ್ದಾರೆ.