ರಾಹುಲ್ ಅವರಲ್ಲಿನ ಮಾನವ ಪ್ರೀತಿ, ಬಡವರ ಬಗೆಗಿನ ಕಾಳಜಿ, ಕೋಮುವಾದಕ್ಕೆ ವಿರುದ್ಧವಾದ ಜಾತ್ಯತೀತ ನಿಲುವು, ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವ ಪ್ರಯತ್ನ, ಅಧ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ ಜತೆಗೆ ಅವರಲ್ಲಿನ ದ್ವಂದ್ವ, ವೈರುಧ್ಯಗಳನ್ನು ಉದಾಹರಣೆ, ದಾಖಲೆಗಳ ಸಮೇತ ಸುಗತ ಅವರು ನಿರೂಪಿಸಿದ್ದಾರೆ. ಪುಸ್ತಕ ಓದುತ್ತಾ ಸಾಗಿದಂತೆ ರಾಹುಲ್ ಅವರನ್ನು ಪರಕಾಯ ಪ್ರವೇಶ ಮಾಡಿರುವಂತೆ ಭಾಸವಾಗುತ್ತದೆ ಎಂದು ವಿಶ್ಲೇಷಿಸಿದರು.