‘ಮದ್ದೂರು ತಾಲ್ಲೂಕಿನ ಕಾರ್ಕಳಿಯ ಮಾದೇಗೌಡ, ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆ ತೆಗೆದುಕೊಂಡು ಪತ್ನಿ ಹಾಗೂ ಮಗನ ಜೊತೆ ಇದೇ 25ರಂದು ಬೆಂಗಳೂರಿಗೆ ಬಂದಿದ್ದರು. ಮದ್ದೂರಿಗೆ ಹೋಗಲು ಬೆಳಿಗ್ಗೆ ರೈಲು ನಿಲ್ದಾಣದಿಂದ ತೂತುಕುಡಿ ಎಕ್ಸ್ಪ್ರೆಸ್ ರೈಲು ಹತ್ತಿದ್ದರು’ ಎಂದು ರೈಲು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ರೈಲು ಹೊರಟಿರುವಾಗಲೇ ಶೌಚಾಲಯಕ್ಕೆ ಹೋಗಿದ್ದ ಮಾದೇಗೌಡ, ಅಲ್ಲಿಂದ ಹೊರಬಂದು ಕಿಟಕಿ ಬಳಿ ನಿಂತಿದ್ದರು. ಹಳಿ ಪಕ್ಕದ ಸಿಗ್ನಲ್ ಕಂಬ ಏರಿ ನಿಂತಿದ್ದ ದುಷ್ಕರ್ಮಿಗಳು, ಅವರನ್ನು ಹೊರಗೆಳೆದು ಮೊಬೈಲ್ ಕಿತ್ತುಕೊಂಡಿದ್ದರು. ಸೈನಿಕ ಹಳಿ ಮೇಲೆಯೇ ಬಿದ್ದು ನರಳಾಡುತ್ತಿದ್ದರು’.