<p><strong>ಬೆಂಗಳೂರು: </strong>ನಗರದಲ್ಲಿ ಕಳೆದ 10 ದಿನಗಳಲ್ಲಿ 189.3 ಮಿಲಿ ಮೀಟರ್ ಮಳೆಯಾಗಿದೆ.</p>.<p>10 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಿರುವ ಮಳೆಯ ಅಂಕಿ–ಅಂಶ ಗಮನಿಸಿದರೆ 2015ರಲ್ಲಿ ಅತೀ ಹೆಚ್ಚು 513.8 ಮಿಲಿ ಮೀಟರ್ ಮಳೆಯಾಗಿದೆ. 2013ರಲ್ಲಿ 352.6 ಮಿ.ಮೀಟರ್, 2014ರಲ್ಲಿ 319 ಮಿ.ಮೀ ಮಳೆ ಸುರಿದಿದೆ. 2016ರಲ್ಲಿ ಅತೀ ಕಡಿಮೆ 33 ಮಿ. ಮೀ. ಮಳೆಯಾಗಿದೆ.</p>.<p>’ಸಾಮಾನ್ಯವಾಗಿ ಅಕ್ಟೋಬರ್ನಲ್ಲಿ ಮುಂಗಾರು ಮುಕ್ತಾಯಗೊಂಡು ಹಿಂಗಾರು ಆರಂಭವಾಗುತ್ತದೆ. ಮುಂಗಾರಿನ ಮಳೆ ಜೂನ್ನಿಂದ ಆಗಸ್ಟ್ ತನಕ ಹೆಚ್ಚು ಮಳೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ವಿಸ್ತರಿಸಿದೆ’ ಎಂದುಕೃಷಿ ಹವಾಮಾನ ತಜ್ಞಶಿವರಾಮ್ ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/photo/last-three-days-heavy-rain-leaves-roads-and-houses-inundated-in-bengaluru-760776.html" target="_blank"> Photos: ಬೆಂಗಳೂರಿನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ</a></strong></p>.<p>‘ಕರಾವಳಿ ಪ್ರದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿ ಜಲಾಶಯಗಳು ತುಂಬಿಕೊಳ್ಳುತ್ತವೆ. ಆದರೆ, ಸೆಪ್ಟೆಂಬರ್ನಲ್ಲಿ ಆಗುವ ಮಳೆ ಇಡೀ ರಾಜ್ಯವನ್ನು ವ್ಯಾಪಿಸುತ್ತದೆ. ಕಳೆದ ಕೆಲ ವರ್ಷಗಳ ಅಂಕಿ ಅಂಶ ನೋಡಿದರೆ ಸೆಪ್ಟೆಂಬರ್ನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ’ ಎಂದರು.</p>.<p>‘ಸೆಪ್ಟೆಂಬರ್ ಅಂತ್ಯದ ವೇಳೆಗೆ ಇನ್ನಷ್ಟು ಮಳೆಯಾಗಲಿದೆ. ವಾರ್ಷಿಕವಾಡಿಕೆಯ ಮಳೆ ಈಗಾಗಲೇ ಸುರಿದಿದೆ. ಮುಂದೆ ಬರುವುದೆಲ್ಲಾ ಹೆಚ್ಚುವರಿ ಮಳೆ’ ಎಂದರು.</p>.<p class="Briefhead"><strong>ಮುಂದುವರಿದ ಮಳೆ: </strong>ಮನೆಗಳಿಗೆ ನೀರು ನಗರದಲ್ಲಿ ಮಳೆ ಆರ್ಭಟ ಬುಧವಾರ ರಾತ್ರಿಯೂ ಮುಂದುವರಿದು ಮತ್ತೆ ಅವಾಂತರ ಸೃಷ್ಟಿಸಿತು. ಮಳೆಗೆ ಕೆಲವು ಬಡಾವಣೆಗಳು ನೀರಿನಲ್ಲಿ ಮುಳುಗೆದ್ದವು.</p>.<p>ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ನಾಯಂಡಹಳ್ಳಿ ಸಮೀಪದ ಪ್ರಮೋದ್ ಲೇಔಟ್ನಲ್ಲಿ ರಾಜಕಾಲುವೆ ತಡೆಗೋಡೆ ಒಡೆದು ಮನೆಗಳಿಗೆ ನೀರು ನುಗ್ಗಿತ್ತು. ಮನೆಯಲ್ಲಿ ಐದು ಅಡಿಯಿಂದ ಎಂಟು ಅಡಿಗಳ ತನಕ ನಿಂತಿದ್ದ ನೀರು ಹೊರ ಹಾಕಲು ಹರಸಾಹಸ ಪಟ್ಟರು.</p>.<p>ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ದವಸ–ಧಾನ್ಯ, ಬಟ್ಟೆಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿದ್ದವು. ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು, ಬೈಕ್ಗಳು ಜಲಾವೃತಗೊಂಡಿದ್ದವು. ಇಡೀ ರಾತ್ರಿ ಜನ ಸಂಕಷ್ಟ ಅನುಭವಿಸುತ್ತಿದ್ದರೆ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p class="Briefhead">ಸಾಯಿ ಲೇಔಟ್ ಮತ್ತೆ ಜಲಾವೃತಹೆಣ್ಣೂರು ಮುಖ್ಯರಸ್ತೆ ವಡ್ಡರಪಾಲ್ಯದಲ್ಲಿ ಬುಧವಾರವೂ ಮನೆಗಳಿಗೆ ನೀರು ನುಗ್ಗಿತ್ತು.</p>.<p>ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿತು. ರಸ್ತೆಯಲ್ಲೂ ಮೂರು ಅಡಿಗೂ ಹೆಚ್ಚು ನೀರು ಸಂಜೆ ವರೆಗೆ ಹರಿಯುತ್ತಲೇ ಇತ್ತು. ಮನೆಯಿಂದ ಹೊರ ಬಂದು ಅಗತ್ಯ ವಸ್ತು ಖರೀದಿ ಮಾಡಲೂ ಸಾಧ್ಯವಾಗದೆ ಜನ ಪರದಾಡಿದರು.</p>.<p>ದಾನಿಗಳುಕುಡಿಯುವ ನೀರು ಮತ್ತು ಆಹಾರದ ಪೊಟ್ಟಣಗಳನ್ನು ಮನೆ–ಮನೆಗಳಿಗೆ ವಿತರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದಲ್ಲಿ ಕಳೆದ 10 ದಿನಗಳಲ್ಲಿ 189.3 ಮಿಲಿ ಮೀಟರ್ ಮಳೆಯಾಗಿದೆ.</p>.<p>10 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಿರುವ ಮಳೆಯ ಅಂಕಿ–ಅಂಶ ಗಮನಿಸಿದರೆ 2015ರಲ್ಲಿ ಅತೀ ಹೆಚ್ಚು 513.8 ಮಿಲಿ ಮೀಟರ್ ಮಳೆಯಾಗಿದೆ. 2013ರಲ್ಲಿ 352.6 ಮಿ.ಮೀಟರ್, 2014ರಲ್ಲಿ 319 ಮಿ.ಮೀ ಮಳೆ ಸುರಿದಿದೆ. 2016ರಲ್ಲಿ ಅತೀ ಕಡಿಮೆ 33 ಮಿ. ಮೀ. ಮಳೆಯಾಗಿದೆ.</p>.<p>’ಸಾಮಾನ್ಯವಾಗಿ ಅಕ್ಟೋಬರ್ನಲ್ಲಿ ಮುಂಗಾರು ಮುಕ್ತಾಯಗೊಂಡು ಹಿಂಗಾರು ಆರಂಭವಾಗುತ್ತದೆ. ಮುಂಗಾರಿನ ಮಳೆ ಜೂನ್ನಿಂದ ಆಗಸ್ಟ್ ತನಕ ಹೆಚ್ಚು ಮಳೆಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿಗೆ ವಿಸ್ತರಿಸಿದೆ’ ಎಂದುಕೃಷಿ ಹವಾಮಾನ ತಜ್ಞಶಿವರಾಮ್ ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/photo/last-three-days-heavy-rain-leaves-roads-and-houses-inundated-in-bengaluru-760776.html" target="_blank"> Photos: ಬೆಂಗಳೂರಿನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ</a></strong></p>.<p>‘ಕರಾವಳಿ ಪ್ರದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ಮಳೆಯಾಗಿ ಜಲಾಶಯಗಳು ತುಂಬಿಕೊಳ್ಳುತ್ತವೆ. ಆದರೆ, ಸೆಪ್ಟೆಂಬರ್ನಲ್ಲಿ ಆಗುವ ಮಳೆ ಇಡೀ ರಾಜ್ಯವನ್ನು ವ್ಯಾಪಿಸುತ್ತದೆ. ಕಳೆದ ಕೆಲ ವರ್ಷಗಳ ಅಂಕಿ ಅಂಶ ನೋಡಿದರೆ ಸೆಪ್ಟೆಂಬರ್ನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ’ ಎಂದರು.</p>.<p>‘ಸೆಪ್ಟೆಂಬರ್ ಅಂತ್ಯದ ವೇಳೆಗೆ ಇನ್ನಷ್ಟು ಮಳೆಯಾಗಲಿದೆ. ವಾರ್ಷಿಕವಾಡಿಕೆಯ ಮಳೆ ಈಗಾಗಲೇ ಸುರಿದಿದೆ. ಮುಂದೆ ಬರುವುದೆಲ್ಲಾ ಹೆಚ್ಚುವರಿ ಮಳೆ’ ಎಂದರು.</p>.<p class="Briefhead"><strong>ಮುಂದುವರಿದ ಮಳೆ: </strong>ಮನೆಗಳಿಗೆ ನೀರು ನಗರದಲ್ಲಿ ಮಳೆ ಆರ್ಭಟ ಬುಧವಾರ ರಾತ್ರಿಯೂ ಮುಂದುವರಿದು ಮತ್ತೆ ಅವಾಂತರ ಸೃಷ್ಟಿಸಿತು. ಮಳೆಗೆ ಕೆಲವು ಬಡಾವಣೆಗಳು ನೀರಿನಲ್ಲಿ ಮುಳುಗೆದ್ದವು.</p>.<p>ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ನಾಯಂಡಹಳ್ಳಿ ಸಮೀಪದ ಪ್ರಮೋದ್ ಲೇಔಟ್ನಲ್ಲಿ ರಾಜಕಾಲುವೆ ತಡೆಗೋಡೆ ಒಡೆದು ಮನೆಗಳಿಗೆ ನೀರು ನುಗ್ಗಿತ್ತು. ಮನೆಯಲ್ಲಿ ಐದು ಅಡಿಯಿಂದ ಎಂಟು ಅಡಿಗಳ ತನಕ ನಿಂತಿದ್ದ ನೀರು ಹೊರ ಹಾಕಲು ಹರಸಾಹಸ ಪಟ್ಟರು.</p>.<p>ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ದವಸ–ಧಾನ್ಯ, ಬಟ್ಟೆಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿದ್ದವು. ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು, ಬೈಕ್ಗಳು ಜಲಾವೃತಗೊಂಡಿದ್ದವು. ಇಡೀ ರಾತ್ರಿ ಜನ ಸಂಕಷ್ಟ ಅನುಭವಿಸುತ್ತಿದ್ದರೆ ಬಿಬಿಎಂಪಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.</p>.<p class="Briefhead">ಸಾಯಿ ಲೇಔಟ್ ಮತ್ತೆ ಜಲಾವೃತಹೆಣ್ಣೂರು ಮುಖ್ಯರಸ್ತೆ ವಡ್ಡರಪಾಲ್ಯದಲ್ಲಿ ಬುಧವಾರವೂ ಮನೆಗಳಿಗೆ ನೀರು ನುಗ್ಗಿತ್ತು.</p>.<p>ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿತು. ರಸ್ತೆಯಲ್ಲೂ ಮೂರು ಅಡಿಗೂ ಹೆಚ್ಚು ನೀರು ಸಂಜೆ ವರೆಗೆ ಹರಿಯುತ್ತಲೇ ಇತ್ತು. ಮನೆಯಿಂದ ಹೊರ ಬಂದು ಅಗತ್ಯ ವಸ್ತು ಖರೀದಿ ಮಾಡಲೂ ಸಾಧ್ಯವಾಗದೆ ಜನ ಪರದಾಡಿದರು.</p>.<p>ದಾನಿಗಳುಕುಡಿಯುವ ನೀರು ಮತ್ತು ಆಹಾರದ ಪೊಟ್ಟಣಗಳನ್ನು ಮನೆ–ಮನೆಗಳಿಗೆ ವಿತರಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>