‘ಬೆಂಗಳೂರಿನ ರಸ್ತೆ, ಚರಂಡಿಗಳನ್ನು ಅಭಿವೃದ್ಧಿ ಮಾಡುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ರಾಜಕಾಲುವೆಗಳ ಹೂಳು ತೆಗೆಯಲು ಎರಡು ವರ್ಷಗಳಿಂದ ವರ್ಷಕ್ಕೆ ತಲಾ ₹80 ಕೋಟಿಗಳನ್ನು ಖರ್ಚು ಮಾಡಿದೆ. ಅದನ್ನು ನುಂಗುವುದಕ್ಕೆ ಬಳಸಲಾಗುತ್ತಿದೆಯೆ ಹೊರತು ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೂಳು ತೆಗೆಯುವ ಗುತ್ತಿಗೆದಾರ ಅದನ್ನು ತೆಗೆದು ಎಲ್ಲಿಗೆ ಸಾಗಿಸಿದ್ದಾನೆ? ಎಲ್ಲಿ ಹಾಕಿದ್ದಾನೆ ಎಂಬ ಲೆಕ್ಕವನ್ನು ಕೊಡಬೇಕಲ್ಲವೇ? ಕೇವಲ ದಾಖಲೆಗಳಲ್ಲಿ ಮಾತ್ರ ಹೂಳು ತೆಗೆಯಲಾಗಿದೆಯೆಂದು ತೋರಿಸಿ ಹಣ ನುಂಗಿ ಹಾಕಲಾಗಿದೆ. ಇದು ಶೇ 40ರಷ್ಟು ಪರ್ಸೆಂಟ್ ವ್ಯವಹಾರವಲ್ಲ; ಶೇ 100 ಪರ್ಸೆಂಟ್ ವ್ಯವಹಾರ’ ಎಂದರು.