<p><strong>ರಾಜರಾಜೇಶ್ವರಿನಗರ</strong>: ಸೊರೆಕುಂಟೆ ಕರಿಯಮ್ಮ ದೇವಿಯ ಉತ್ಸವ, ಜಾತ್ರಾ ಮಹೋತ್ಸವ ಮತ್ತು ಕಬ್ಬಾಳಮ್ಮ, ಮಾರಮ್ಮ ದೇವರ ಉತ್ಸವ, ಪೂಜಾಕುಣಿತ ವಿವಿಧ ಜಾನಪದ ಕಲಾ ಪ್ರದರ್ಶನದೊಂದಿಗೆ ದೊಡ್ಡಗೊಲ್ಲರ ಹಟ್ಟಿ, ನಾಗದೇವನಹಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.</p>.<p>ನಾಗದೇವನಹಳ್ಳಿಯ ಭೂತಪ್ಪಸ್ವಾಮಿ ದೇವಾಲಯ ಆವರಣದಿಂದ ಪ್ರಾರಂಭವಾದ ಉತ್ಸವದಲ್ಲಿ ಹೆಣ್ಣುಮಕ್ಕಳು ತಂಬಿಟ್ಟು, ಬೆಲ್ಲದ ಆರತಿಯನ್ನು ಮನೆಯಿಂದ ತಂದು ಕರಿಯಮ್ಮ ದೇವಿಗೆ ಬೆಳಗಿದರು. ಪಟಾಕಿ, ಬಾಣ ಬಿರುಸುಗಳ ಆರ್ಭಟದೊಂದಿಗೆ ತಮಟೆ, ನಗಾರಿ, ಚಂಡೆವಾದ್ಯಗಳ ಸದ್ದಿಗೆ ವಯಸ್ಸಿನ ಅಂತರವಿಲ್ಲದೆ ಗ್ರಾಮಸ್ಥರು ಹೆಜ್ಜೆಹಾಕುತ್ತಾ ಕುಣಿದು ಕುಪ್ಪಳಿಸಿದರು.</p>.<p>ಸಗಣಿ ನೀರು, ಬಣ್ಣದ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಮನೆ, ರಸ್ತೆ, ಬೀದಿಗಳನ್ನು ಸಿಂಗರಿಸಲಾಗಿತ್ತು. ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ದೇವರ ಉತ್ಸವ ಸಾಗಿಬಂದಾಗ ಮನೆ ಮುಂದೆ ಪೂಜೆ ಸಲ್ಲಿಸಿ, ಈಡುಗಾಯಿ ಹಾಕಿದರು.</p>.<p>ತಪ್ಪಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಡಿಪೋ ಕೃಷ್ಣಪ್ಪ, ಬಿಜೆಪಿ ಮುಖಂಡ ಎನ್.ಸಿ.ಕುಮಾರ್, ಪೂಜಾರಿ ತಿಮ್ಮಯ್ಯ, ದಾಸಪ್ಪ, ಮಾರಣ್ಣ, ಮುಖಂಡರಾದ ರಾಮಣ್ಣ, ಜೆ.ದೊಡ್ಡಯ್ಯ, ಮೀಸೆ ಕಾಟಪ್ಪ, ಯೆರಪ್ಪ, ಬೆಣ್ಣೆ ಚಿಕ್ಕಣ್ಣ, ಪ್ರಕಾಶ್ ಉತ್ಸವದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ</strong>: ಸೊರೆಕುಂಟೆ ಕರಿಯಮ್ಮ ದೇವಿಯ ಉತ್ಸವ, ಜಾತ್ರಾ ಮಹೋತ್ಸವ ಮತ್ತು ಕಬ್ಬಾಳಮ್ಮ, ಮಾರಮ್ಮ ದೇವರ ಉತ್ಸವ, ಪೂಜಾಕುಣಿತ ವಿವಿಧ ಜಾನಪದ ಕಲಾ ಪ್ರದರ್ಶನದೊಂದಿಗೆ ದೊಡ್ಡಗೊಲ್ಲರ ಹಟ್ಟಿ, ನಾಗದೇವನಹಳ್ಳಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.</p>.<p>ನಾಗದೇವನಹಳ್ಳಿಯ ಭೂತಪ್ಪಸ್ವಾಮಿ ದೇವಾಲಯ ಆವರಣದಿಂದ ಪ್ರಾರಂಭವಾದ ಉತ್ಸವದಲ್ಲಿ ಹೆಣ್ಣುಮಕ್ಕಳು ತಂಬಿಟ್ಟು, ಬೆಲ್ಲದ ಆರತಿಯನ್ನು ಮನೆಯಿಂದ ತಂದು ಕರಿಯಮ್ಮ ದೇವಿಗೆ ಬೆಳಗಿದರು. ಪಟಾಕಿ, ಬಾಣ ಬಿರುಸುಗಳ ಆರ್ಭಟದೊಂದಿಗೆ ತಮಟೆ, ನಗಾರಿ, ಚಂಡೆವಾದ್ಯಗಳ ಸದ್ದಿಗೆ ವಯಸ್ಸಿನ ಅಂತರವಿಲ್ಲದೆ ಗ್ರಾಮಸ್ಥರು ಹೆಜ್ಜೆಹಾಕುತ್ತಾ ಕುಣಿದು ಕುಪ್ಪಳಿಸಿದರು.</p>.<p>ಸಗಣಿ ನೀರು, ಬಣ್ಣದ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಮನೆ, ರಸ್ತೆ, ಬೀದಿಗಳನ್ನು ಸಿಂಗರಿಸಲಾಗಿತ್ತು. ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ದೇವರ ಉತ್ಸವ ಸಾಗಿಬಂದಾಗ ಮನೆ ಮುಂದೆ ಪೂಜೆ ಸಲ್ಲಿಸಿ, ಈಡುಗಾಯಿ ಹಾಕಿದರು.</p>.<p>ತಪ್ಪಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಡಿಪೋ ಕೃಷ್ಣಪ್ಪ, ಬಿಜೆಪಿ ಮುಖಂಡ ಎನ್.ಸಿ.ಕುಮಾರ್, ಪೂಜಾರಿ ತಿಮ್ಮಯ್ಯ, ದಾಸಪ್ಪ, ಮಾರಣ್ಣ, ಮುಖಂಡರಾದ ರಾಮಣ್ಣ, ಜೆ.ದೊಡ್ಡಯ್ಯ, ಮೀಸೆ ಕಾಟಪ್ಪ, ಯೆರಪ್ಪ, ಬೆಣ್ಣೆ ಚಿಕ್ಕಣ್ಣ, ಪ್ರಕಾಶ್ ಉತ್ಸವದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>