ಸಾವಯವ ಸಂತೆ: ಹಲಸೂರು ಕೆರೆ ಅಂಗಳದಲ್ಲಿ ಏರ್ಪಡಿಸಿದ್ದ ಸಾವಯವ ಸಂತೆಗೆ ಆಡಳಿತಾಧಿಕಾರಿ ಚಾಲನೆ ನೀಡಿದರು. ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸ ಹಾಗೂ ಎಲೆಗಳನ್ನು ಬಳಸಿ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು. ಮರುಬಳಕೆ ಸಾಮಗ್ರಿಗಳು, ಗೊಬ್ಬರ ತಯಾರಿಸಲು ನೆರವಾಗುವ ತೆಂಗಿನ ನಾರಿನ ಪುಡಿ, ಮಡಕೆ, ತೆಂಗಿನ ನಾರಿನಲ್ಲಿ ತಯಾರಿಸಿರುವ ಚೀಲ, ಮ್ಯಾಟ್, ತಾರಸಿ ತೋಟಕ್ಕೆ ಬೆಳಸುವ ಪರಿಕರಗಳು, ಬಟ್ಟೆ ಚೀಲ ಮೊದಲಾದ ಪರಿಸರ ಸ್ನೇಹಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.