ಹೇಮಲತಾ ಅವರು ಉಪಮೇಯರ್ ಆಗಿದ್ದಾಗ ಈ ವರದಿ ಮಂಡಿಸಲು ಮುಂದಾಗಿದ್ದರು. ವರದಿಯಲ್ಲಿ ಲೋಪಗಳಿದ್ದುದರಿಂದ ಅದನ್ನು ಹಿಂಪಡೆಯಲಾಗಿತ್ತು. ನಿಕಟಪೂರ್ವ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಅವರು ಕರಡು ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದ್ದರು. ಜುಲೈನಲ್ಲಿ ನಡೆದ ಸಭೆಯಲ್ಲಿ ಆಗಿನ ಮೇಯರ್ ಸಂಪತ್ರಾಜ್ ಅವರೂ ಈ ವರದಿಯನ್ನು ತ್ವರಿತವಾಗಿ ಮಂಡಿಸುವಂತೆ ಸೂಚಿಸಿದ್ದರು. ಆದರೂ ಅಧಿಕಾರಿಗಳು ಕ್ರಮ ವಹಿಸಿರಲಿಲ್ಲ.