‘ವಿಶೇಷ ಕರ್ತವ್ಯದ ತಂಡದಲ್ಲಿದ್ದ ಭೀಮಾಶಂಕರ್ ಕರ್ತವ್ಯ ಲೋಪ ಎಸಗಿರುವುದು ಇಲಾಖೆಯ ಆಂತರಿಕ ತನಿಖೆಯಿಂದ ಗೊತ್ತಾಗಿದೆ. ಅಷ್ಟೇ ಅಲ್ಲ, ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅನುಮತಿ ಇಲ್ಲದೇ ತಂಡ ಚಿತ್ರೀಕರಣ ನಡೆಸಿದೆ. ಭೀಮಾಶಂಕರ್ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ’ ಎಂದೂ ಅವರು ವಿವರಿಸಿದರು.