ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಅಪರಾಧಿ ಸಂತೋಷ್ ರುದ್ರಪಾಲ್ ಎಂಬಾತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಎಫ್ಟಿಎಸ್ಸಿ 3ನೇ ನ್ಯಾಯಾಲಯವು ಆದೇಶಿಸಿದೆ.
ಬಾಲಕಿ ಕುಟುಂಬಸ್ಥರು ಬಡಾವಣೆಯೊಂದರ ಶೆಡ್ನಲ್ಲಿ ವಾಸವಿದ್ದರು. ಶೆಡ್ ಪಕ್ಕದಲ್ಲೇ ಅಪರಾಧಿ ನೆಲೆಸಿದ್ದ. 2019ರ ಮಾರ್ಚ್ 4ರಂದು ಬಾಲಕಿ ಕುಟುಂಬಸ್ಥರು ಇಲ್ಲದಿರುವಾಗ ಅತ್ಯಾಚಾರ ಎಸಗಿ ಸಂತೋಷ್ ಪರಾರಿಯಾಗಿದ್ದ. ಬೇಗೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 376 ಅಡಿ 10 ವರ್ಷಗಳ ಕಠಿಣ ಶಿಕ್ಷೆ, ₹ 10 ಸಾವಿರ ದಂಡ, ಈ ದಂಡದ ಮೊತ್ತವನ್ನು ಪಾವತಿಸದಿದ್ದರೆ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ, ಕಲಂ 4 ಹಾಗೂ ಪೋಕ್ಸೊ ಕಾಯ್ಡೆ ಅಡಿ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ, ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಇಷ್ರತ್ ಜಹಾನ್ ಅರ ಆದೇಶಿಸಿದ್ದಾರೆ.
ಸಂತ್ರಸ್ತ ಬಾಲಕಿಗೆ ₹ 4 ಲಕ್ಷ ಪರಿಹಾರ ಹಾಗೂ ಅಪರಾಧಿಗೆ ವಿಧಿಸಿದ್ದ ದಂಡದಲ್ಲಿ ₹ 15 ಸಾವಿರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರಿ ವಕೀಲೆ ಗೀತಾ ರಾಮಕೃಷ್ಣ ಗೊರವರ ವಾದಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.