<p><strong>ಮಾಗಡಿ</strong>: ತಾಲ್ಲೂಕಿನ ಸೋಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ಬುಧವಾರ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನೆರವೇರಿತು.</p><p>ಭರತ ಹುಣ್ಣಿಮೆ ದಿನದ ಅಂಗವಾಗಿ ಬೆಳಗ್ಗೆ ಮಠದಲ್ಲಿ ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿಗೆ ಪಾದಪೂಜೆ ಮೂಲಕ ಗುರುಪೂಜೆ ನಡೆಯಿತು. ಗಂಗಾ ಪೂಜೆ, ದೇವಿ ಆರಾಧನೆ ಸೇರಿದಂತೆ ಧಾರ್ಮಿಕ ವಿಧಿ, ವಿಧಾನ ನಡೆದವು.</p><p>ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯದಿಂದ ಬಂದಿದ್ದ ಜೋಗತಿ ಅಮ್ಮನವರು ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು.</p><p>ವಿವಿಧ ಕಲಾ ತಂಡಗಳು ಪ್ರದರ್ಶನ ಜನರ ಗಮನ ಸೆಳೆದವು. ಜತೆಗೆ ಜೋಗತಿ ನೃತ್ಯ ಉತ್ಸವಕ್ಕೆ ಮತ್ತಷ್ಟು ಮೆರಗು ತಂದಿತು. ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.</p><p>ಆರೋಗ್ಯ ಶಿಬಿರ: ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನೂರಕ್ಕೂ ಹೆಚ್ಚು ಮಂದಿಗೆ ಕನ್ನಡಕ ವಿತರಿಸಲಾಯಿತು.</p><p>ಮುತ್ತೂಟ್ ಸ್ನೇಹಾಶ್ರಯ ಹಾಗೂ ಕಾವೇರಿ ರಕ್ತ ನಿಧಿ ವತಿಯಿಂದ ನಡೆದ ಆರೋಗ್ಯ ತಪಾಸಣೆಯಲ್ಲಿ ಬೆಂಗಳೂರು ಸ್ಪರ್ಶ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಹೆಸರುಘಟ್ಟದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವೈದೇಹಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಾಸನ್ ಐ ಕೇರ್, ಕೆಎಲ್ಇ ಡೆಂಟಲ್ ಕಾಲೇಜು ವೈದ್ಯರು ಭಾಗವಹಿಸಿದ್ದರು.</p><p>ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿ, ಎಂ.ತಿಮ್ಮೇಗೌಡ, ಚಿನ್ನೇಗೌಡ, ಜೆ.ಪಿ. ಸುಧಾಕರ್, ಧರ್ಮವಿಜೇತ್, ಹರೀಶ್, ಶ್ರೀಕಾಂತ್, ಸಂಪತ್, ಗೋಪಾಲ್, ವೆಂಕಟೇಶ್, ದುಶ್ಯಂತ್, ಪ್ರಕಾಶ್, ಸಂತೋಷ್, ಗೋಪಿ ಭಟ್, ಶಶಾಂಕ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ತಾಲ್ಲೂಕಿನ ಸೋಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ಬುಧವಾರ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನೆರವೇರಿತು.</p><p>ಭರತ ಹುಣ್ಣಿಮೆ ದಿನದ ಅಂಗವಾಗಿ ಬೆಳಗ್ಗೆ ಮಠದಲ್ಲಿ ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿಗೆ ಪಾದಪೂಜೆ ಮೂಲಕ ಗುರುಪೂಜೆ ನಡೆಯಿತು. ಗಂಗಾ ಪೂಜೆ, ದೇವಿ ಆರಾಧನೆ ಸೇರಿದಂತೆ ಧಾರ್ಮಿಕ ವಿಧಿ, ವಿಧಾನ ನಡೆದವು.</p><p>ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯದಿಂದ ಬಂದಿದ್ದ ಜೋಗತಿ ಅಮ್ಮನವರು ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು.</p><p>ವಿವಿಧ ಕಲಾ ತಂಡಗಳು ಪ್ರದರ್ಶನ ಜನರ ಗಮನ ಸೆಳೆದವು. ಜತೆಗೆ ಜೋಗತಿ ನೃತ್ಯ ಉತ್ಸವಕ್ಕೆ ಮತ್ತಷ್ಟು ಮೆರಗು ತಂದಿತು. ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.</p><p>ಆರೋಗ್ಯ ಶಿಬಿರ: ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನೂರಕ್ಕೂ ಹೆಚ್ಚು ಮಂದಿಗೆ ಕನ್ನಡಕ ವಿತರಿಸಲಾಯಿತು.</p><p>ಮುತ್ತೂಟ್ ಸ್ನೇಹಾಶ್ರಯ ಹಾಗೂ ಕಾವೇರಿ ರಕ್ತ ನಿಧಿ ವತಿಯಿಂದ ನಡೆದ ಆರೋಗ್ಯ ತಪಾಸಣೆಯಲ್ಲಿ ಬೆಂಗಳೂರು ಸ್ಪರ್ಶ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಹೆಸರುಘಟ್ಟದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವೈದೇಹಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಾಸನ್ ಐ ಕೇರ್, ಕೆಎಲ್ಇ ಡೆಂಟಲ್ ಕಾಲೇಜು ವೈದ್ಯರು ಭಾಗವಹಿಸಿದ್ದರು.</p><p>ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿ, ಎಂ.ತಿಮ್ಮೇಗೌಡ, ಚಿನ್ನೇಗೌಡ, ಜೆ.ಪಿ. ಸುಧಾಕರ್, ಧರ್ಮವಿಜೇತ್, ಹರೀಶ್, ಶ್ರೀಕಾಂತ್, ಸಂಪತ್, ಗೋಪಾಲ್, ವೆಂಕಟೇಶ್, ದುಶ್ಯಂತ್, ಪ್ರಕಾಶ್, ಸಂತೋಷ್, ಗೋಪಿ ಭಟ್, ಶಶಾಂಕ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>