<p><strong>ಬೆಂಗಳೂರು</strong>: ‘ಇತ್ತೀಚೆಗೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ಕೃತಿ ಚೌರ್ಯ ಢಾಳಾಗಿ ಕಾಣಿಸುತ್ತಿದೆ. ಹಿಂದೆ ಯಾರೋ ರಚಿಸಿದ ಅಧ್ಯಯನ ಪ್ರಬಂಧಗಳಲ್ಲಿನ ವಾಕ್ಯಗಳನ್ನೇ ತಮ್ಮ ಪ್ರಬಂಧಗಳಲ್ಲಿ ಯಥಾವತ್ತು ದಾಖಲಿಸಿರುವುದನ್ನು ಗಮನಿಸಿದ್ದೇನೆ’ ಎಂದು ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದರು.</p>.<p>ಬಿಎಂಶ್ರೀ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶ್ರೀಮತಿ ಸಾವಿತ್ರಮ್ಮ ಪ್ರೊ. ಎಂ.ವಿ.ಸೀತಾರಾಮಯ್ಯ ಸಾಹಿತ್ಯ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಒಂದೇ ವಿಷಯದ ಮೇಲಿನ ಬೇರೆ ಬೇರೆ ಸಂಶೋಧನಾ ಪ್ರಬಂಧಗಳಲ್ಲಿ ಇಂಥ ನಕಲು ವಾಕ್ಯಗಳನ್ನು ಗುರುತಿಸಿದ್ದೇನೆ. ಹೀಗೆ ನಕಲು ಮಾಡಿ, ಸಂಶೋಧನೆಯಲ್ಲಿ ಬಳಸಿರುವ ಸಾಹಿತ್ಯದ ಮೂಲ ಆಕರವನ್ನು ಹೇಳದೇ, ತಾವೇ ಬರೆದಿದ್ದೇವೆಂಬ ಭ್ರಮೆ ಉಂಟು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಅನೇಕ ವಿದ್ಯಾರ್ಥಿಗಳು ಸಾಹಿತ್ಯದ ಮೂಲ ಆಕರಗಳನ್ನು ಬಳಸದೇ, ‘ಗೂಗಲ್ ಸರ್ಚ್’ ಮೂಲಕ ‘ಸಂಶೋಧನೆ’ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದರಿಂದ ಅನೇಕ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪು ವಿಚಾರಗಳು ದಾಖಲಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಪ್ರೊ. ಎಂ.ವಿ.ಸೀತಾರಾಮಯ್ಯ(ಎಂವಿಸೀ) ಅವರ ಆಲೋಚನೆಗಳು, ಆದರ್ಶಗಳು ನನ್ನ ಬದುಕನ್ನು ರೂಪಿಸಿವೆ. ಅಂಥ ಮೇರು ವ್ಯಕ್ತಿಯ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಬದುಕಿನ ಭಾಗ್ಯ’ ಎಂದು ಹೇಳಿದರು.</p>.<p>ಬಿಎಂಶ್ರೀ ಪ್ರತಿಷ್ಠಾನದ ಸಂಸ್ಥಾಪಕರ ದಿನಾಚರಣೆ ಕುರಿತು ಮಾತನಾಡಿದ ಸಾಹಿತಿ ಪಿ.ವಿ.ನಾರಾಯಣ, ‘ಸರ್ಕಾರ ಬಿ.ಎಂ.ಶ್ರೀಕಂಠಯ್ಯನವರ(ಬಿಎಂಶ್ರೀ) ಕುರಿತು ಏನೂ ಕೆಲಸ ಮಾಡದಿದ್ದ ಕಾಲಘಟ್ಟದಲ್ಲಿ ಎಂವಿಸೀ ಅವರೇ ತಮ್ಮ ಗುರು ಬಿಎಂಶ್ರೀ ಅವರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಿದರು’ ಎಂದು ಸ್ಮರಿಸಿದರು.</p>.<p>‘ನಾಲ್ಕು ದಶಕಗಳಿಂದ ನಡೆಯುತ್ತಿರುವ ಈ ಪ್ರತಿಷ್ಠಾನ ನೂರಾರು ಎಂ.ಫಿಲ್ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ನೆರವಾಗಿದೆ. ಹತ್ತಾರು ದತ್ತಿ ಪ್ರಶಸ್ತಿಗಳು, ವಿಚಾರ ಸಂಕಿರಣಗಳನ್ನೂ ವರ್ಷಪೂರ್ತಿ ನಡೆಸುತ್ತಿದೆ’ ಎಂದರು.</p>.<p>ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ ‘ಪ್ರೊ. ಎಂವಿಸೀ ಅವರು ಸಾಹಿತ್ಯ ಕೃಷಿಯ ಜೊತೆಗೆ, ತಾವು ಬೆಳೆಯುತ್ತಾ, ಎಲ್ಲರನ್ನೂ ಬೆಳೆಸುವ ಪ್ರಯತ್ನ ಮಾಡಿದರು. ಅವರಂತೆ ನಡೆಯುತ್ತಿರುವ ಪ್ರೊ.ಎ.ವಿ. ನಾವಡ ಅವರಿಗೆ, ಪ್ರೊ.ಎಂವಿಸೀ ಸಾಹಿತ್ಯ ಪುರಸ್ಕಾರ ಸಂದಿರುವುದು ಅರ್ಥಪೂರ್ಣವಾಗಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಶಾಂತರಾಜು, ಪ್ರತಿಷ್ಠಾನದ ಗುರುಪ್ರಸಾದ್, ಪ್ರೊ. ಎಂ.ವಿ.ಸೀತಾರಾಮಯ್ಯ ಅವರ ನಾಲ್ವರು ಪುತ್ರರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಇತ್ತೀಚೆಗೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ಕೃತಿ ಚೌರ್ಯ ಢಾಳಾಗಿ ಕಾಣಿಸುತ್ತಿದೆ. ಹಿಂದೆ ಯಾರೋ ರಚಿಸಿದ ಅಧ್ಯಯನ ಪ್ರಬಂಧಗಳಲ್ಲಿನ ವಾಕ್ಯಗಳನ್ನೇ ತಮ್ಮ ಪ್ರಬಂಧಗಳಲ್ಲಿ ಯಥಾವತ್ತು ದಾಖಲಿಸಿರುವುದನ್ನು ಗಮನಿಸಿದ್ದೇನೆ’ ಎಂದು ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದರು.</p>.<p>ಬಿಎಂಶ್ರೀ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶ್ರೀಮತಿ ಸಾವಿತ್ರಮ್ಮ ಪ್ರೊ. ಎಂ.ವಿ.ಸೀತಾರಾಮಯ್ಯ ಸಾಹಿತ್ಯ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ಒಂದೇ ವಿಷಯದ ಮೇಲಿನ ಬೇರೆ ಬೇರೆ ಸಂಶೋಧನಾ ಪ್ರಬಂಧಗಳಲ್ಲಿ ಇಂಥ ನಕಲು ವಾಕ್ಯಗಳನ್ನು ಗುರುತಿಸಿದ್ದೇನೆ. ಹೀಗೆ ನಕಲು ಮಾಡಿ, ಸಂಶೋಧನೆಯಲ್ಲಿ ಬಳಸಿರುವ ಸಾಹಿತ್ಯದ ಮೂಲ ಆಕರವನ್ನು ಹೇಳದೇ, ತಾವೇ ಬರೆದಿದ್ದೇವೆಂಬ ಭ್ರಮೆ ಉಂಟು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಅನೇಕ ವಿದ್ಯಾರ್ಥಿಗಳು ಸಾಹಿತ್ಯದ ಮೂಲ ಆಕರಗಳನ್ನು ಬಳಸದೇ, ‘ಗೂಗಲ್ ಸರ್ಚ್’ ಮೂಲಕ ‘ಸಂಶೋಧನೆ’ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದರಿಂದ ಅನೇಕ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪು ವಿಚಾರಗಳು ದಾಖಲಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಪ್ರೊ. ಎಂ.ವಿ.ಸೀತಾರಾಮಯ್ಯ(ಎಂವಿಸೀ) ಅವರ ಆಲೋಚನೆಗಳು, ಆದರ್ಶಗಳು ನನ್ನ ಬದುಕನ್ನು ರೂಪಿಸಿವೆ. ಅಂಥ ಮೇರು ವ್ಯಕ್ತಿಯ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಬದುಕಿನ ಭಾಗ್ಯ’ ಎಂದು ಹೇಳಿದರು.</p>.<p>ಬಿಎಂಶ್ರೀ ಪ್ರತಿಷ್ಠಾನದ ಸಂಸ್ಥಾಪಕರ ದಿನಾಚರಣೆ ಕುರಿತು ಮಾತನಾಡಿದ ಸಾಹಿತಿ ಪಿ.ವಿ.ನಾರಾಯಣ, ‘ಸರ್ಕಾರ ಬಿ.ಎಂ.ಶ್ರೀಕಂಠಯ್ಯನವರ(ಬಿಎಂಶ್ರೀ) ಕುರಿತು ಏನೂ ಕೆಲಸ ಮಾಡದಿದ್ದ ಕಾಲಘಟ್ಟದಲ್ಲಿ ಎಂವಿಸೀ ಅವರೇ ತಮ್ಮ ಗುರು ಬಿಎಂಶ್ರೀ ಅವರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಿದರು’ ಎಂದು ಸ್ಮರಿಸಿದರು.</p>.<p>‘ನಾಲ್ಕು ದಶಕಗಳಿಂದ ನಡೆಯುತ್ತಿರುವ ಈ ಪ್ರತಿಷ್ಠಾನ ನೂರಾರು ಎಂ.ಫಿಲ್ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ನೆರವಾಗಿದೆ. ಹತ್ತಾರು ದತ್ತಿ ಪ್ರಶಸ್ತಿಗಳು, ವಿಚಾರ ಸಂಕಿರಣಗಳನ್ನೂ ವರ್ಷಪೂರ್ತಿ ನಡೆಸುತ್ತಿದೆ’ ಎಂದರು.</p>.<p>ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ ‘ಪ್ರೊ. ಎಂವಿಸೀ ಅವರು ಸಾಹಿತ್ಯ ಕೃಷಿಯ ಜೊತೆಗೆ, ತಾವು ಬೆಳೆಯುತ್ತಾ, ಎಲ್ಲರನ್ನೂ ಬೆಳೆಸುವ ಪ್ರಯತ್ನ ಮಾಡಿದರು. ಅವರಂತೆ ನಡೆಯುತ್ತಿರುವ ಪ್ರೊ.ಎ.ವಿ. ನಾವಡ ಅವರಿಗೆ, ಪ್ರೊ.ಎಂವಿಸೀ ಸಾಹಿತ್ಯ ಪುರಸ್ಕಾರ ಸಂದಿರುವುದು ಅರ್ಥಪೂರ್ಣವಾಗಿದೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಶಾಂತರಾಜು, ಪ್ರತಿಷ್ಠಾನದ ಗುರುಪ್ರಸಾದ್, ಪ್ರೊ. ಎಂ.ವಿ.ಸೀತಾರಾಮಯ್ಯ ಅವರ ನಾಲ್ವರು ಪುತ್ರರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>