‘ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಅವರು ₹ 81.92 ಲಕ್ಷ ಮೌಲ್ಯದ ಆಸ್ತಿ ಸಂಪಾದಿಸಿರುವುದನ್ನು ಹಾಗೂ ₹ 34.44 ಲಕ್ಷ ಖರ್ಚು ಮಾಡಿದ್ದನ್ನು ಪತ್ತೆ ಹಚ್ಚಿದ್ದರು. ಕೆಲಸಕ್ಕೆ ಸೇರಿದ ದಿನದಿಂದ ದಾಳಿಯಾಗುವವರೆಗೂ ಶ್ರೀನಿವಾಸ್ ಒಟ್ಟು ₹ 1.16 ಕೋಟಿ ಸಂಪಾದಿಸಿದ್ದರು. ಈ ಪೈಕಿ ₹ 75.77 ಲಕ್ಷ ಸಂಪಾದನೆಗೆ ಮಾತ್ರ ದಾಖಲೆ ಒದಗಿಸಿದ್ದ ಶ್ರೀನಿವಾಸ್, ಉಳಿದ ₹ 40.60 ಲಕ್ಷ ಸಂಪಾದನೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದು ಅಕ್ರಮ ಆಸ್ತಿ ಎಂಬುದನ್ನು ಪತ್ತೆ ಮಾಡಿದ್ದ ಲೋಕಾಯುಕ್ತ ಡಿವೈಎಸ್ಪಿ ವಿ. ಶೇಖರ್, ಭ್ರಷ್ಟಾಚಾರ ತಡೆ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದೂ ಅವರು ತಿಳಿಸಿದರು.