<p><strong>ಬೆಂಗಳೂರು:</strong> ‘ಮೊಬೈಲ್ ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿಗಳ ಡೆಲಿವರಿ ಬಾಯ್ಗಳು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತವನ್ನುಂಟು ಮಾಡಿದರೆ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.</p>.<p>30 ನಿಮಿಷದಲ್ಲಿ ಆಹಾರ ಪೂರೈಕೆ ಮಾಡಬೇಕೆಂಬ ನಿಯಮವನ್ನು ಕಂಪನಿಗಳು ರೂಪಿಸಿವೆ. ಡೆಲಿವರಿ ಬಾಯ್ ಒಬ್ಬರು ಗಾಯಗೊಂಡು ಬಟ್ಟೆಗೆ ರಕ್ತ ಅಂಟಿಕೊಂಡಿದ್ದ ಸ್ಥಿತಿಯಲ್ಲೇ ಗ್ರಾಹಕ ಸಿ. ಸುಭಾಕರ್ ಅವರಿಗೆ ಆಹಾರ ಪೂರೈಕೆ ಮಾಡಿದ್ದರು. ಆ ಸಂಬಂಧ ಸುಭಾಕರ್ ಟ್ವೀಟ್ ಮಾಡಿದ್ದರು. ಅದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.</p>.<p>ಭಾಸ್ಕರ್ ರಾವ್, ‘30 ನಿಮಿಷದೊಳಗೆ ಗ್ರಾಹಕರಿಗೆ ಆಹಾರ ತಲುಪಿಸಲು ಡೆಲಿವರಿ ಬಾಯ್ಗಳು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಡೆಲಿವರಿ ಸಮಯವನ್ನು 30 ನಿಮಿಷದಿಂದ 40 ನಿಮಿಷಕ್ಕೆ ಏರಿಸಿ’ ಎಂದೂ ಕೋರಿದ್ದರು.</p>.<p>ಅದಕ್ಕೆ ಮರು ಟ್ವೀಟ್ ಮಾಡಿದ್ದಸ್ವಿಗ್ಗಿ ಕಂಪೆನಿ, ’ನಿಮ್ಮ ಕಾಳಜಿ ಅರ್ಥವಾಗುತ್ತದೆ. ಡೆಲಿವರಿ ಬಾಯ್ಗಳು ನಿಯಮ ಉಲ್ಲಂಘನೆ ಮಾಡಿದರೆ ನಮ್ಮ ಗಮನಕ್ಕೆ ತನ್ನಿ’ ಎಂದಿತ್ತು.</p>.<p>ಅದಕ್ಕೆ ತಿರುಗೇಟು ನೀಡಿರುವ ಭಾಸ್ಕರ್ ರಾವ್, ‘ನಿಮ್ಮ ಕಿರಿಕಿರಿಯಿಂದಲೇ ಹೆಚ್ಚಿನ ಸಂಖ್ಯೆ ಬಾಯ್ಗಳು ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರಿಂದ ಅಪಘಾತವಾಗಿ ಏನಾದರೂ ಸಮಸ್ಯೆಯಾಗಬೇಕು, ಅವಾಗ ಸ್ವಿಗ್ಗಿ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮೊಬೈಲ್ ಆ್ಯಪ್ ಆಧರಿತ ಆಹಾರ ಪೂರೈಕೆ ಕಂಪನಿಗಳ ಡೆಲಿವರಿ ಬಾಯ್ಗಳು ಸಂಚಾರ ನಿಯಮ ಉಲ್ಲಂಘಿಸಿ ಅಪಘಾತವನ್ನುಂಟು ಮಾಡಿದರೆ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.</p>.<p>30 ನಿಮಿಷದಲ್ಲಿ ಆಹಾರ ಪೂರೈಕೆ ಮಾಡಬೇಕೆಂಬ ನಿಯಮವನ್ನು ಕಂಪನಿಗಳು ರೂಪಿಸಿವೆ. ಡೆಲಿವರಿ ಬಾಯ್ ಒಬ್ಬರು ಗಾಯಗೊಂಡು ಬಟ್ಟೆಗೆ ರಕ್ತ ಅಂಟಿಕೊಂಡಿದ್ದ ಸ್ಥಿತಿಯಲ್ಲೇ ಗ್ರಾಹಕ ಸಿ. ಸುಭಾಕರ್ ಅವರಿಗೆ ಆಹಾರ ಪೂರೈಕೆ ಮಾಡಿದ್ದರು. ಆ ಸಂಬಂಧ ಸುಭಾಕರ್ ಟ್ವೀಟ್ ಮಾಡಿದ್ದರು. ಅದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.</p>.<p>ಭಾಸ್ಕರ್ ರಾವ್, ‘30 ನಿಮಿಷದೊಳಗೆ ಗ್ರಾಹಕರಿಗೆ ಆಹಾರ ತಲುಪಿಸಲು ಡೆಲಿವರಿ ಬಾಯ್ಗಳು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಡೆಲಿವರಿ ಸಮಯವನ್ನು 30 ನಿಮಿಷದಿಂದ 40 ನಿಮಿಷಕ್ಕೆ ಏರಿಸಿ’ ಎಂದೂ ಕೋರಿದ್ದರು.</p>.<p>ಅದಕ್ಕೆ ಮರು ಟ್ವೀಟ್ ಮಾಡಿದ್ದಸ್ವಿಗ್ಗಿ ಕಂಪೆನಿ, ’ನಿಮ್ಮ ಕಾಳಜಿ ಅರ್ಥವಾಗುತ್ತದೆ. ಡೆಲಿವರಿ ಬಾಯ್ಗಳು ನಿಯಮ ಉಲ್ಲಂಘನೆ ಮಾಡಿದರೆ ನಮ್ಮ ಗಮನಕ್ಕೆ ತನ್ನಿ’ ಎಂದಿತ್ತು.</p>.<p>ಅದಕ್ಕೆ ತಿರುಗೇಟು ನೀಡಿರುವ ಭಾಸ್ಕರ್ ರಾವ್, ‘ನಿಮ್ಮ ಕಿರಿಕಿರಿಯಿಂದಲೇ ಹೆಚ್ಚಿನ ಸಂಖ್ಯೆ ಬಾಯ್ಗಳು ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರಿಂದ ಅಪಘಾತವಾಗಿ ಏನಾದರೂ ಸಮಸ್ಯೆಯಾಗಬೇಕು, ಅವಾಗ ಸ್ವಿಗ್ಗಿ ಆಡಳಿತ ಮಂಡಳಿಯೇ ಕಂಬಿ ಹಿಂದೆ ಇರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>