ಕಾಯಿ ಕೀಳುವಾಗ ಸಂಚು: ‘ನಳಿನಾ ಅವರ ಮನೆ ಎದುರು ತೆಂಗಿನ ಮರಗಳಿವೆ. ಅವುಗಳ ಕಾಯಿ ಕೀಳಿಸಲು ಕೂಲಿ ಕೆಲಸಗಾರರಿಗಾಗಿ ಹುಡುಕಾಡುತ್ತಿದ್ದರು. ಮೊದಲ ಬಾರಿ ಮನೆಗೆ ಹೋಗಿದ್ದ ಸಭಾಪತಿ, ಕಾಯಿ ಕಿತ್ತುಕೊಟ್ಟಿದ್ದರು. ವೃದ್ಧೆ ಒಬ್ಬರೇ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ, ಸುಲಿಗೆ ಮಾಡಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.